ಹಿರೇಬಂಡಾಡಿ: ತಂಗಿ, ತಮ್ಮನಿಂದ ಹಲ್ಲೆ- ದೂರು ದಾಖಲು

0

ಉಪ್ಪಿನಂಗಡಿ: ಮನೆಯಲ್ಲಿದ್ದ ಅವಿವಾಹಿತ ಅಕ್ಕನಿಗೆ ಜಾಗದ ಪಾಲು ಕೊಡುವ ವಿಚಾರದಲ್ಲಿ ತಗಾದೆ ತೆಗೆದು ತಮ್ಮ ಮತ್ತು ತಂಗಿ ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ಹಿರೇಬಂಡಾಡಿ ಗ್ರಾಮದ ಹೊಸಗದ್ದೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಲ್ಲೆಗೆ ಒಳಗಾದ ಮಹಿಳೆ ಹಿರೇಬಂಡಾಡಿ ಗ್ರಾಮದ ಹೊಸಗದ್ದೆ ಮನೆ ನಿವಾಸಿ ದಿವಂಗತ ಗುಡ್ಡಪ್ಪ ರೈ ಎಂಬವರ ಪುತ್ರಿ ಅನಸೂಯ ರೈ ಯಾನೆ ಸರಸ್ವತಿ ಎಂಬವರಾಗಿರುತ್ತಾರೆ. ಅನಸೂಯ ರೈ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ಘಟನೆ ಬಗ್ಗೆ ಅನಸೂಯ ರೈ ಉಪ್ಪಿನಂಗಡಿ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ “ಅವಿವಾಹಿತೆಯಾಗಿರುವ ನಾನು ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡು ಬದುಕುತ್ತಿದ್ದು, ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಹೋಗಿ ಬಂದು ಮನೆಯಲ್ಲಿ ಕುಳಿತಿರುವಾಗ ತನ್ನ ತಮ್ಮ ಸದಾಶಿವ ರೈ ಮತ್ತು ತಂಗಿ ರೇಖಾ ರೈ ಅವಾಚ್ಯ ಶಬ್ಧಗಳಿಂದ ಬೈದು ನನ್ನನ್ನು ಎಳೆದಾಡಿ, ಹಲ್ಲೆ ನಡೆಸಿರುತ್ತಾರೆ. ಘಟನೆ ಬಗ್ಗೆ ನನ್ನ ಅಕ್ಕ ಮೋಹಿನಿ ಶೆಟ್ಟಿ ಮತ್ತು ತಂಗಿ ಚೈತ್ರಾಳಿಗೆ ಕರೆ ಮಾಡಿ ಘಟನೆಯ ವಿಷಯ ತಿಳಿಸಿದ್ದು, ಅವರು ಬಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ” ಎಂದು ತಿಳಿಸಿದ್ದಾರೆ.


ನಮ್ಮ ತಂದೆಯಿಂದ ಬರಬೇಕಾದ ಆಸ್ತಿ ಪಾಲಿನ ವಿಚಾರದಲ್ಲಿ ತಕರಾರು ಇದ್ದು, ಆದ ಕಾರಣ ನನ್ನನ್ನು ಮನೆಯಿಂದ ಹೊರ ಹಾಕುವ ಸಲುವಾಗಿ ಸದಾಶಿವ ರೈ ಮತ್ತು ರೇಖಾ ಈ ಕೃತ್ಯ ಎಸಗಿರುತ್ತಾರೆ. ಈ ಆರೋಪಿತರಿಗೆ ಅಕ್ಕನ ಗಂಡ ಬಾಲಕೃಷ್ಣ ರೈ ಮಡಪ್ಪಾಡಿ ಕುಮ್ಮಕ್ಕು ನೀಡುತ್ತಿದ್ದು, ನನಗೆ ಜೀವ ಭಯ ಉಂಟಾಗಿದೆ. ಆದ ಕಾರಣ ಈ ಮೂವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.ಅನಸೂಯ ರೈ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here