ಏ.6:ಪುತ್ತೂರು ವಕೀಲರ ಸಂಘದ ಚುನಾವಣೆ- ನಾಲ್ವರಿಂದ ನಾಮಪತ್ರ ಸಲ್ಲಿಕೆ-ನಾಮಪತ್ರ ಸಲ್ಲಿಕೆ ನಾಳೆ ಕೊನೆ

0

ಪುತ್ತೂರು:ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ 2024-25ರಿಂದ 2025-26ರ ಸಾಲಿನ 2 ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ರಚನೆಗಾಗಿ ಏ.6ರಂದು ಚುನಾವಣೆ  ನಡೆಯಲಿದೆ.ಸಂಘದ ಅಧ್ಯಕ್ಷ,ಕಾರ್ಯದರ್ಶಿ, ಉಪಾಧ್ಯಕ್ಷ, ಕೋಶಾಧಿಕಾರಿ, ಜತೆಕಾರ್ಯದರ್ಶಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮಾ.22ರಂದು ಪ್ರಾರಂಭಗೊಂಡಿದ್ದು ಈವರೆಗೆ ಅಧ್ಯಕ್ಷ ಸ್ಥಾನಕ್ಕೆ ಮೂವರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಓರ್ವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾಗಿರುವ ಮಹೇಶ್ ಕಜೆ, ಜಿ.ಜಗನ್ನಾಥ ರೈ, ಸಂತೋಷ್ ಕುಮಾರ್ ಉಪ್ಪಿನಂಗಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ ನಂದಿಲ ಅವರು ನಾಮಪತ್ರ ಸಲ್ಲಿಸಿದ್ದಾರೆ.ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಸಾಮಾನ್ಯ ಅಥವಾ ಆಜೀವ ಸದಸ್ಯರಾಗಿ 10 ವರ್ಷಗಳ ಅವಧಿ ಪೂರೈಸಿರಬೇಕು.ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಾಮನ್ಯ ಅಥವಾ ಆಜೀವ ಸದಸ್ಯರಾಗಿ 8 ವರ್ಷಗಳ ಅವಧಿ ಪೂರೈಸಿರಬೇಕು.ಕೋಶಾಧಿಕಾರಿ ಮತ್ತು ಜತೆಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಸಾಮಾನ್ಯ ಅಥವಾ ಆಜೀವ ಸದಸ್ಯರಾಗಿ 5 ವರ್ಷಗಳ ಅವಧಿ ಪೂರೈಸಿರಬೇಕು.ಚುನಾವಣಾಧಿಕಾರಿಗಳಾಗಿ ವಕೀಲರಾದ ಎನ್.ಕಿಶೋರ್ ಕೊಳತ್ತಾಯ, ಕೆ.ಭಾಸ್ಕರ್ ಕೋಡಿಂಬಾಳ, ದೀಪಕ್ ಬೊಳುವಾರು ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಾಮಪತ್ರ ಸಲ್ಲಿಸಲು ನಾಳೆ ಕಡೆ ದಿನ
ನಾಮಪತ್ರ ಸಲ್ಲಿಸಲು ಮಾ.28ರ ಸಂಜೆ ಗಂಟೆ 4ರ ತನಕ ಅವಕಾಶವಿದೆ.ಮಾ.29ಕ್ಕೆ ಬೆಳಿಗ್ಗೆ ಗಂಟೆ 10ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.ಏ.2ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದ್ದು,ಏ.6ಕ್ಕೆ ವಕೀಲರ ಸಂಘದ ಪರಾಶರ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 10ರಿಂದ ಸಂಜೆ ಗಂಟೆ 4ರ ತನಕ ಮತದಾನ ನಡೆಯಲಿದೆ.ಅದೇ ದಿನ ಸಂಜೆ ಗಂಟೆ 4ರಿಂದ ಮತ ಎಣಿಕೆ ನಡೆಯಲಿದೆ.

LEAVE A REPLY

Please enter your comment!
Please enter your name here