ಶರವೂರಿನಲ್ಲಿ ಆಲ್ಟೋ ಕಾರು ಡಿಕ್ಕಿ- ತಮಿಳುನಾಡಿನ ಪಾರ್ಥಸಾರಥಿ ಮೃತ್ಯು

0

ಕಡಬ ತಾಲೂಕು ಆಲಂಕಾರಿನ ಶರವೂರು ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ತಮಿಳುನಾಡಿನ ಪಾರ್ಥಸಾರಥಿ ಎಂಬವರಿಗೆ ಆಲ್ಟೋ ಕಾರು ಡಿಕ್ಕಿ ಹೊಡೆದ ಘಟನೆ ಮಾ.28ರಂದು ನಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪಾರ್ಥಸಾರಥಿಯನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ಆತ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಪಾರ್ಥಸಾರಥಿ ಮೂಲತಃ ತಮಿಳುನಾಡಿನವರಾಗಿದ್ದು, ಬೋರ್‌ ವೆಲ್‌ ಲಾರಿಯ ರಿಪೇರಿಗಾಗಿ ಕಡಬಕ್ಕೆ ಬಂದಿದ್ದರು. ಮಾ.28ರಂದು ಶರವೂರು ಎಂಬಲ್ಲಿ ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಕೆಎ 05 ಎನ್‌ 9534 ನೋದಣಿ ಸಂಖ್ಯೆಯ ಆಲ್ಟೋ 800 ಕಾರು ಪಾರ್ಥಸಾರಥಿಗೆ ಡಿಕ್ಕಿ ಹೊಡೆದಿದೆ. ಪವನ್‌ ಎಂಬಾತ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ಅಪಘಾತವನ್ನುಂಟು ಮಾಡಿದ್ದಾರೆಂದು ದಿನೇಶ್‌ ಕುಮಾರ್‌ ಎಂಬವರು ಕಡಬ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ.ಕ್ರ: 42/2024, ಕಲಂ 279,304ಎ ,ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here