ಕೆಯ್ಯೂರು ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆ

0

ಕೆಯ್ಯೂರು ಶಕ್ತಿ ಕೇಂದ್ರದಲ್ಲಿ ಮುನ್ನಡೆ ಸಾಧಿಸಲು ಕಾರ್ಯ ಪ್ರವೃತ್ತರಾಗೋಣ- ಸಹಜ್ ರೈ ಬಳಜ್ಜ

ಪುತ್ತೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದಲ್ಲಿ ಹಾಗೂ ಕೆಯ್ಯೂರು ಶಕ್ತಿ ಕೇಂದ್ರದಲ್ಲಿ ಬಾಜಪ ಮುನ್ನಡೆಗೆ ಶಕ್ತಿ ಮೀರಿ ಶ್ರಮಿಸೋಣ ಎಂದು ಬಾಜಪ ಪುಣಚ ಮಹಾಶಕ್ತಿ ಕೇಂದ್ರದ ಚುನಾವಣಾ ಪ್ರಭಾರಿ ಸಹಜ್ ರೈ ಬಳಜ್ಜ ತಿಳಿಸಿದರು. ಅವರು ತನ್ನ ಸ್ವಗೃಹ ಜಯಹರಿ ನಿವಾಸದಲ್ಲಿ ನಡೆದ ಕೆಯ್ಯೂರು ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.


ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮಾತನಾಡಿ ಬೂತ್ ಮಟ್ಟದ ಕಾರ್ಯದ ಕುರಿತಾಗಿ ಮಾಹಿತಿ ನೀಡಿದರು.ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ ಚುನಾವಣಾ ಸಹಪ್ರಭಾರಿ ಪ್ರಸನ್ನ ರೈ ಮಾರ್ತ ಮಾತನಾಡಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಹುಮತದ ಸರಕಾರಕ್ಕಾಗಿ ತಮ್ಮ ಒಂದೊಂದು ಮತಗಳು ಅಮೂಲ್ಯ ಎಂದು ತಿಳಿಸಿದರು.

ಸಭೆಯಲ್ಲಿ ಕೆಯ್ಯೂರು ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು,ಕೆಯ್ಯೂರು ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಆಳ್ವ ಇಳಂತಾಜೆ,ಮುಖಂಡರಾದ ಮನೋಜ್ ರೈ ಮಾಡಾವು ಹಾಗೂ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here