ಮಜ್ಜಾರಡ್ಕ ಯುವಶಕ್ತಿ ಬಳಗದಿಂದ ಮಕ್ಕಳಿಗೆ ಬೇಸಿಗೆ ಶಿಬಿರ 

0

ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣುಯುವಶಕ್ತಿ ಬಳಗ  ಮಜ್ಜಾರಡ್ಕ ಇದರ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಮಜ್ಜಾರಡ್ಕದಲ್ಲಿ ಶೈಲಜಾರಾಜೇಶ್,ನ್ಯಾಯವಾದಿಗಳು, ಕರ್ನಾಟಕ ಸರಕಾರದ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತರು,ಸಂಸ್ಥಾಪಕರು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಬಾಳ್ತಿಲ ಇವರು ಉದ್ಘಾಟನೆ ಮಾಡಿದರು.

ಮಕ್ಕಳ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಹೆತ್ತವರಿಗೆ ಹಾಗೂ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮತ್ತು ವಿವಿಧ ರೀತಿಯ ಹಾಡು, ನೃತ್ಯ, ಕಾನೂನಿನ ಬಗ್ಗೆ ಮಾಹಿತಿ ಕೊಟ್ಟರು. 

ವೇದಿಕೆಯಲ್ಲಿ ಸಂಘಟನೆಯ ಉಪಾಧ್ಯಕ್ಷ ಯತೀಶ್ ಕೋಡಿಯಡ್ಕ, ಕುಣಿತ ಭಜನೆಯ ಶಿಕ್ಷಕ  ಸದಾನಂದ ಆಚಾರ್ಯ ಕಾಣಿಯೂರು, ಶ್ರೀ ಅಯ್ಯಪ್ಪ ಭಜನಾ ಮಂದಿರ ಸ್ವಾಮಿನಗರ ಇದರ ಅಧ್ಯಕ್ಷ ಸತೀಶ್ ಎಚ್. ಕೆ, ಎಂಡೆಸಾಗು, ಜಿಲ್ಲಾ ಪ್ರಶಸ್ತಿ ಪುರಸ್ಕೃತರು, ಮತ್ತು ಸಂಘಟನೆಯ ಸಂಘಟಕ ರಾಜೇಶ್ ಕೆ ಮಯೂರ ಉಪಸ್ಥಿತರಿದ್ದರು, ಉಪಹಾರದ ವ್ಯವಸ್ಥೆಯನ್ನು ಸಂಘಟನೆಯ ಜೊತೆ ಕಾರ್ಯದರ್ಶಿ  ಲೋಕೇಶ್ ಸ್ವಾಮೀನಗರ ಮಾಡಿದರು.  ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಸ್ವಾಮಿ ನಗರ ಪ್ರಾರ್ಥಿಸಿದರು, ಯುವಶಕ್ತಿ ಬಳಗದ ಪ್ರದಾನ ಕಾರ್ಯದರ್ಶಿ  ಭರತ್ ಓಲ್ತಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here