ಬಿಜೆಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಕಡಬದ ಹೇಮಂತ್ ರೈ ಮನವಳಿಕೆ

0

ಆಲಂಕಾರು: ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಹ ಸಂಚಾಲಕರಾಗಿ ಕಡಬ ತಾಲೂಕಿನ ಮನವಳಿಕೆಗುತ್ತು ಹೇಮಂತ್ ರೈ ಯವರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ರವರು ಆದೇಶ ಹೊರಡಿಸಿದ್ದಾರೆ.

ಹೇಮಂತ್ ರೈಯವರು ಕಡಬ ತಾಲೂಕು ಆಲಂಕಾರು ಸಮೀಪದ ಪ್ರತಿಷ್ಠಿತ ಮನವಳಿಕೆ ಗುತ್ತುವಿನವರಾಗಿದ್ದು, ಪ್ರವಾಸೋದ್ಯಮ ಉದ್ಯಮಿಯಾಗಿದ್ದಾರೆ.ಈ ಹಿಂದೆ ಕ್ಲಬ್ ಮಹೀಂದ್ರಾ, ಸ್ಟರ್ಲಿಂಗ್ ಹಾಲೀಡೆಸ್, ಲೀಸರ್ ವೆಕೇಶನ್ಸ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದರು.

ಎಂಬಿಎ, ಎಲ್.ಎಲ್.ಬಿ ಪದವೀಧರರಾದ ಹೇಮಂತ್ ರೈಯವರು ಹಿಂದೆ ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ವೃತ್ತಿಪರರ ಪ್ರಕೋಷ್ಠದ ಸಂಚಾಲಕರಾಗಿದ್ದರು.ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದು ಸಂಘದ ಪ್ರಾಥಮಿಕ ಹಾಗೂ ದ್ವಿತೀಯ ಶಿಕ್ಷಾವರ್ಗವನ್ನೂ ಪೂರ್ಣಗೊಳಿಸಿರುತ್ತಾರೆ. ಕಾಲೇಜು ಜೀವನಗಳಲ್ಲಿ ಎ.ಬಿ.ವಿ.ಪಿಯ ಪದಾಧಿಕಾರಿಯಾಗಿದ್ದು ಇದೀಗ ಬಿ.ಜೆ.ಪಿ ಆರ್ಥಿಕ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here