ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾಚಿಂತನೆ ಆರಂಭ

0

ಪುತ್ತೂರು: ಕುಂಬ್ರ ಸಮೀಪದ ಕುರಿಕ್ಕಾರ ತರವಾಡು ಮನೆಯಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯು ಏ. 16 ರಂದು ಆರಂಭಗೊಂಡಿದೆ. ದೈವಜ್ಞಾರಾದ ಲಕ್ಷ್ಮೀನಾರಾಯಣ ಮತ್ತು ಸಜೀಶ್ ಮುಳ್ಳೇರಿಯರವರು ಪ್ರಶ್ನಾ ಚಿಂತನೆಯನ್ನು ನಡೆಸಿಕೊಡುತ್ತಿದ್ದಾರೆ. ಕುರಿಕ್ಕಾರ ತರವಾಡು ಕುಟುಂಬದ ಯಜಮಾನ ಕುಯ್ಯಾರು ವಿಶ್ವನಾಥ ರೈ, ತರವಾಡು ಕುಟುಂಬದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ ರೈ ಪುಂಡಿಕಾಯಿ ಸೇರಿದಂತೆ ಕುಟುಂಬದ ಹಿರಿಯ ಮತ್ತು ಕಿರಿಯ ಸದಸ್ಯರುಗಳು ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here