ಬಪ್ಪಳಿಗೆ ನೆಲ್ಲಿಗುಂಡಿಯಲ್ಲಿ ದಲಿತ ಕಾಲೋನಿಯ ಸಂಪರ್ಕ ರಸ್ತೆಗಾಗಿ ದ.ಕ.ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು: ಪುತ್ತೂರು ಕಸಬಾ ಗ್ರಾಮದ ಕರ್ಕುಂಜ ಬಪ್ಪಳಿಗೆಯ ನೆಲ್ಲಿಗುಂಡಿಯಲ್ಲಿ ದಲಿತ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಮತ್ತು ಚರಂಡಿ ಜಾಗ ಅತಿಕ್ರಮಣಗೊಂಡಿದೆ. ಇದನ್ನು ತೆರವು ಮಾಡಿ ರಸ್ತೆ ಸಂಪರ್ಕ ಒದಗಿಸುವಂತೆ ದ.ಕ.ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ.17ರಂದು ಮನವಿ ಮಾಡಿದರು.


ನೆಲ್ಲಿಗುಂಡಿ ದಲಿತ ಕಾಲೋನಿಯಲ್ಲಿ ರಸ್ತೆ ಮತ್ತು ಚರಂಡಿ ಅತಿಕ್ರಮಣದಿಂದ ಪ.ಜಾತಿ ಮತ್ತ ಪ.ಪಂಗಡದ ಸುಮಾರು 50 ಬಡ ಕುಟುಂಬಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ಸರಕಾರ ಸ್ವಾಧೀನ ಪಡಿಸಿ ನಮಗೆ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧ್ಯಕ್ಷ ಸಂಜೀವ ಕೋಟ್ಯಾನ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here