ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಧನ ಸಹಾಯದ ಕೊಡುಗೆ

0

ಪುತ್ತೂರು: ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಭವನದ ನವೀಕರಣ ಕಾಮಗಾರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ರೂ. 5 ಲಕ್ಷ ಸಹಾಯ ಧನವನ್ನು ಕೊಡುಗೆಯಾಗಿ ನೀಡಿದ್ದು, ಈ ಸಹಾಯ ಧನದ ಚೆಕ್‌ನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಂಘದ ಅಧ್ಯಕ್ಷರಾದ ಹೆಚ್. ಮಹಮ್ಮದ್ ಆಲಿ ರವರಿಗೆ ವಿತರಿಸಿದರು.

ಈ ಸಂಧರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್, ನಿರ್ದೇಶಕರುಗಳಾದ ಸದಾನಂದ ಶೆಟ್ಟಿ ಕೂರೇಲು, ಗಣೇಶ್ ರೈ ತೊಟ್ಲ, ಗಣೇಶ್ ರೈ ಕುರಿಯ, ಇಸ್ಮಾಯಿಲ್ ಮಲಾರು, ಸಂಶುದ್ದೀನ್ ನೀರ್ಕಜೆ, ಶೀನಪ್ಪ ಮರಿಕೆ, ತಿಮ್ಮಪ್ಪ ನಾಯ್ಕ ಜಂಗಮುಗೇರು, ಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕರಾದ ಶರತ್ ಡಿ., ಸಂಘದ ವ್ಯವಸ್ಥಾಪಕರಾದ ಅಜಿತ್ ಕುಮಾರ್ ರೈ, ಶಾಖಾ ವ್ಯವಸ್ಥಾಪಕರಾದ ಸುಭಾಷಿನಿ ವಿ ರೈ, ಸಿಬ್ಬಂದಿಗಳಾದ ಉಮೇಶ್ ಎಸ್.ಕೆ, ರಾಜೇಶ್ ಕುಮಾರ್, ವಿನಯ ಕುಮಾರ್ ರೈ, ಅರ್ಜುನ್ ಭಾಸ್ಕರ್, ಪ್ರಶಾಂತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here