ಎಸ್‌ಎಸ್‌ಎಲ್‌ಸಿ : ಶೇ.100 ಫಲಿತಾಂಶದೊಂದಿಗೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶ್ರೀಯಾ, ಬಾಲಾಜಿ ತಾಲೂಕಿಗೆ ಪ್ರಥಮ, ದ್ವಿತೀಯ

0

ಪುತ್ತೂರು: ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇಲ್ಲಿನ ತೆಂಕಿಲ‌ ವಿವೇಕನಗರ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶ್ರೀಯಾ ಮತ್ತು ಬಾಲಾಜಿಯವರು ಕ್ರಮವಾಗಿ ಪುತ್ತೂರು ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ಶಾಲೆಯು ಈ ಬಾರಿ ಶೇ.100 ಫಲಿತಾಂಶ ದಾಖಲಿಸಿದೆ.

ಶ್ರೀಯಾ (621) (ನೆಹರುನಗರ ನಿವಾಸಿ ಪ್ರಶಾಂತ್ ಮತ್ತು ಮಾಲತಿ ದಂಪತಿ ಪುತ್ರಿ), ಬಾಲಾಜಿ (620) (ಕೊಂಬೆಟ್ಟು ನಿವಾಸಿ ಉದಯಕುಮಾರ್ ಮತ್ತು ಶಿಕ್ಷಕಿ ಪುಷ್ಪಾವತಿ ದಂಪತಿ ಪುತ್ರ) ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಾಗಿದ್ದಾರೆ. ಶಾಲೆಗೆ ತೃತೀಯ ಸ್ಥಾನಗಳನ್ನು ಶ್ರೀನಿಧಿ (618) ಮತ್ತು ವಿಶಾಲ್ (618) ಪಡೆದುಕೊಂಡಿದ್ದಾರೆ. ಶಾಲೆಯ ಉತ್ತಮ ಫಲಿತಾಂಶಕ್ಕಾಗಿ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಅಭಿನಂದಿಸಿದೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಟಾಪರ್ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡು ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here