ಕುಂಡಡ್ಕ ಬೇರಿಕೆ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ವಿಟ್ಲ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ ಬೇರಿಕೆ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ‌ನಡೆಯಿತು. ಅಧ್ಯಕ್ಷರಾಗಿ ಏಲ್ಯಣ್ಣ ಪೂಜಾರಿ ಮೈರುಂಡ, ಉಪಾಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ಕೆಮನಾಜೆ, ಕಾರ್ಯದರ್ಶಿಯಾಗಿ ಮೋಹನ್ ಗುರ್ಜಿನಡ್ಕ, ಜತೆ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಬದಿಗುಡ್ಡೆ, ಕೋಶಾಧಿಕಾರಿಯಾಗಿ ಲೋಹಿತ್ ಪೂಜಾರಿ ಪಿಲಿಂಜ, ಸಂಘಟನಾ ಕಾರ್ಯದರ್ಶಿಯಾಗಿ ಚೆನ್ನಪ್ಪ ಪೂಜಾರಿ ಪಾದೆರರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಗೆ ಸದಸ್ಯರುಗಳಾಗಿ ಕೇಶವ ಪಾಂಡೇಲು, ಯಶಸ್ವಿ ಕಟ್ನಾಜೆ, ವೀರಪ್ಪ ಪೂಜಾರಿ ಪಿಲಿಂಜ, ರಾಜೇಶ ಪೂಜಾರಿ ಹಲಸಿನ ಕಟ್ಟೆ, ಅಕ್ಷಯಕುಂದರ್ ಮರುವಾಳರವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ದೇಜಪ್ಪ ಪೂಜಾರಿ ನಿಡ್ಯ, ಕಾರ್ಯಕಾರಿ ಸಮಿತಿಗೆ ಗೌರವ ಸಲಹೆಗಾರರಾಗಿ ಕೃಷ್ಣಪ್ಪ ಪೂಜಾರಿ ಪಾಂಡೇಲು, ನಾರಾಯಣ ಪೂಜಾರಿ ಕಟ್ನಾಜೆ, ಕೃಷ್ಣಪ್ಪ ಪೂಜಾರಿ ಜೇಡರಕೋಡಿ, ಜಯರಾಮ ಪೂಜಾರಿ ಕಾರ್ಯಾಡಿ ಗುತ್ತು, ಚಂದ್ರಪೂಜಾರಿ ಓಜಾಲ, ಕೃಷ್ಣಪ್ಪ ಪೂಜಾರಿ ಮೈರುಂಡ, ದಾಮೋದರ ಪೂಜಾರಿ ಹೊಸಮಾರುರವರನ್ನು ನೇಮಕ ಮಾಡಲಾಯಿತು. ಹರೀಶ ನೀರಕೋಡಿ ಸ್ವಾಗತಿಸಿ, ಮೋಹನ್ ಗುರ್ಜಿನಡ್ಕ ವಂದಿಸಿದರು.

LEAVE A REPLY

Please enter your comment!
Please enter your name here