![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಅಕ್ಷಯ ಕಾಲೇಜು ಪುತ್ತೂರು ರಾಷ್ಟ್ರೀಯ ಸೇವಾ ಯೋಜನಾ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ಯೋಗ ಶಿಕ್ಷಕಿ ಹೇಮಚಂದ್ರಹಾಸ ಅಗಲಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಯೋಗದ ಮಹತ್ವವನ್ನು ಸ್ವಯಂಸೇವಕರಿಗೆ ತಿಳಿಸಿದರು.
![](https://puttur.suddinews.com/wp-content/uploads/2024/06/unnamed-1.jpg)
ಕಾರ್ಯಕ್ರಮದಲ್ಲಿ ಸ್ವಯಂ ಸೇವಕಿ ಪ್ರಕೃತಿ ಪ್ರಾರ್ಥಿಸಿ, ವೇನುಶ್ರೀ ಸ್ವಾಗತಿಸಿ, ದೀಕ್ಷಾ ವಂದಿಸಿದರು. ವರ್ಷಿಣಿ ನಿರೂಪಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಕಿಶೋರ್ ರೈ, ಘಟಕ ನಾಯಕ ಜೀವನ್, ನಾಯಕಿ ನವಮಿ ಉಪಸ್ಥಿತರಿದ್ದರು.