ನಿವೃತ್ತ ಯೋಧ ಜಾನ್ಸನ್ ಕುಳತ್ತಿನಾಲ್ ಹೃದಯಾಘಾತದಿಂದ ನಿಧನ

0

ನೆಲ್ಯಾಡಿ: ಕೊಣಾಲು ಗ್ರಾಮದ ಆರ್ಲ ಪೊಯ್ಯಲ್‌ಕುಳತ್ತಿನಾಲ್ ನಿವಾಸಿ, ನಿವೃತ್ತ ಯೋಧ ಜಾನ್ಸನ್(58ವ.)ಅವರು ಹೃದಯಾಘಾತದಿಂದ ಜೂ.25ರಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.


ಜಾನ್ಸನ್ ಅವರ ಪತ್ನಿ ಶಾಂತ ಅವರು ಮೈಸೂರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಸ್ಟಾಪ್‌ನರ್ಸ ಆಗಿದ್ದು ಜಾನ್ಸನ್ ಅವರು ಕುಟುಂಬ ಸಮೇತ ಕಳೆದ ಹಲವು ವರ್ಷಗಳಿಂದ ಮೈಸೂರಿನಲ್ಲಿಯೇ ವಾಸವಾಗಿದ್ದರು. ಇವರ ಹಿರಿಯ ಪುತ್ರ ಪವನ್ ಬೆಂಗಳೂರಿನಲ್ಲಿ ಉದ್ಯೋಗದ ಜೊತೆಗೆ ಸಿಎ ಕೋರ್ಸ್ ಮಾಡುತ್ತಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮಗನಲ್ಲಿಗೆ ಹೋಗಿದ್ದ ಜಾನ್ಸನ್ ಅವರು ಕಳೆದ ರಾತ್ರಿ ಆತನ ರೂಮ್‌ನಲ್ಲಿ ಮಲಗಿದ್ದು ಮುಂಜಾನೆ 1.30ರ ವೇಳೆಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸಮೀಪದ ಸ್ಪಂದನ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಜಾನ್ಸನ್ ಅವರು 1980ರಲ್ಲಿ ಭಾರತೀಯ ಭೂ ಸೇನೆಯ ಗಡಿ ರಕ್ಷಣಾ ಪಡೆಗೆ ಸೇರ್ಪಡೆಗೊಂಡಿದ್ದು 15 ವರ್ಷ ದೇಶದ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದರು. ಆ ಬಳಿಕ 5 ವರ್ಷ ಚೀನಾದಲ್ಲೂ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಪತ್ನಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದರು. ಮೃತರು ತಂದೆ ಜೋಸೆಫ್, ತಾಯಿ ಅನ್ನಮ್ಮ, ಪತ್ನಿ ಶಾಂತ, ಪುತ್ರರಾದ ಪವನ್, ಪ್ರಜ್ವಲ್, ಓರ್ವ ಸಹೋದರ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಮೈಸೂರಿನ ಮನೆಗೆ ಕೊಂಡೊಗಿ ಬಳಿಕ ಅಲ್ಲಿಂದ ಕೊಣಾಲು ಗ್ರಾಮದ ಆರ್ಲ ಪೊಯ್ಯಲ್ ಮನೆಗೆ ತರಲಾಗಿದ್ದು ಜೂ.26ರಂದು ಮಧ್ಯಾಹ್ನ ಕೊಣಾಲು ಆರ್ಲ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here