ಕಡಬ: ಭೀಮಗುಂಡಿ ಹೊನ್ನಪ್ಪ ಗೌಡರವರ ಶ್ರದ್ಧಾಂಜಲಿ ಸಭೆ

0

ಕಡಬ: ಜೂ.6ರಂದು ನಿಧನರಾದ ಕುಟ್ರುಪ್ಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಹೊನ್ನಪ್ಪ ಗೌಡರವರ ಶ್ರದ್ದಾಂಜಲಿ ಸಭೆ ಜೂ.25ರಂದು ಕುಟ್ರುಪ್ಪಾಡಿ ಗ್ರಾಮದ ಭೀಮಗುಂಡಿ ಮನೆಯಲ್ಲಿ ನಡೆಯಿತು.

ಯವಜನ ಒಕ್ಕೂಟ ಕಡಬ ತಾಲೂಕು ಅಧ್ಯಕ್ಷ ಶಿವಪ್ರಸಾದ್ ಮೈಲೇರಿರವರು ಮಾತನಾಡಿ, ಮೃತ ಹೊನ್ನಪ್ಪ ಗೌಡರದ್ದು ಸರಳತೆ, ಶ್ರೇಷ್ಠ ಸಂಸ್ಕಾರ, ನಯ ವಿನಯದಿಂದ ಕೂಡಿದ ವ್ಯಕ್ತಿತ್ವವಾಗಿತ್ತು. ಅವರ ನ್ಯಾಯ ನಿಷ್ಠೆಯ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಗುಣಗಾನ ಮಾಡಿ ಹೊನ್ನಪ್ಪ ಗೌಡರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಹೇಳಿ ಶ್ರದ್ಧಾಂಜಲಿ ಸಲ್ಲಿಸಿದರು. ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಗಿರಿಜ ವಿ, ಶಿಕ್ಷಕರಾದ ಕೇಶವ ಕೆ, ಕುಸುಮ,ಗಾಯತ್ರಿ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕಡಬ ಶಾಖಾ ವ್ಯವಸ್ಥಾಪಕ ವಿಜಯಕುಮಾರ್ ರೈ, ನಾಗೇಶ್ ಗೌಡ ಕೊಲ್ಲೆಸಾಗು, ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷೆ ನೀಲಾವತಿಶಿವರಾಮ ಗೌಡ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸುಬ್ರಹ್ಮಣ್ಯ ಶಾಖಾ ವ್ಯವಸ್ಥಾಪಕ ಪ್ರದೀಪ್ ರೈ, ಕ್ಯಾಂಪ್ಕೋ ಕಡಬ ಶಾಖಾ ಮ್ಯಾನೇಜರ್ ಮಹೇಶ್ ಶೆಟ್ಟಿ ಕುಂಟೋಡಿ, ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಮೇಶ್ ಎಸ್, ಕಡಬ ಜೂನಿಯರ್ ಕಾಲೇಜು ಶಿಕ್ಷಕ ದೇವಿಪ್ರಸಾದ್, ಕೆನರಾ ಬ್ಯಾಂಕ್ ಆಲಂಕಾರು ಶಾಖೆ ಸಿಬ್ಬಂದಿ ಪ್ರಜ್ವಲ್, ದಯಾನಂದ ಗೋಳಿತ್ತೊಟ್ಟು, ತಿಮ್ಮಪ್ಪ ಗೌಡ ಮಯಿಪಾಲ ಪಟ್ರಮೆ, ವಸಂತ ಅರ್ವ, ಗಣೇಶ್ ಗೌಡ ಮರ್ದಾಳ, ಹಿತೇಶ್ ಮಂಡೆಕರ, ಪೆರಾಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಜಯಪ್ರಕಾಶ್, ಕಡಬ ಸಾಯಿಸ್ಟೋರ್‌ನ ಮಾಲಕ ಕರುಣಾಕರ ಪೂಜಾರಿ, ವೆಂಕಟೇಶ್ ಪಾಡ್ಲ, ಪದ್ಮನಾಭ ಕೆರೆಕ್ಕೋಡಿ, ಕಳಾರ ಶ್ರೀ ದೇವಿ ಅಟೋ ವರ್ಕ್ಸ್‌ನ ಮಾಲಕ ದೇವಣ್ಣ ಗೌಡ ಸಂಪಡ್ಕ, ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ, ಬಾಲಕೃಷ್ಣ ಗೌಡ ಒಗ್ಗು, ಗೋಪಾಲ ಗೌಡ, ಬಾಲಪ್ಪ ಗೌಡ, ಚೆನ್ನಪ್ಪ ಗೌಡ, ಜತ್ತಪ್ಪ ಗೌಡ, ಸಿ.ಪಿ.ಸಿ.ಆರ್.ಐ ನಿವೃತ್ತ ಸಿಬ್ಬಂದಿ ಶಿವಮ್ಮ ಸೇರಿದಂತೆ ಹಲವು ಮಂದಿ ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಮೃತರ ಪುತ್ರರಾದ ವೀರಪ್ಪ ಗೌಡ, ತಿಮ್ಮಪ್ಪ ಗೌಡ, ಹರಿಯಪ್ಪ ಗೌಡ, ಮಾಜಿ ಸೈನಿಕ ಶೇಷಪ್ಪ ಗೌಡ, ಶಿಕ್ಷಕ ಶಿವಣ್ಣ ಗೌಡ, ಪುತ್ರಿ ಲೀಲಾವತಿ, ಸೊಸೆಯಂದಿರಾದ ಕುಸುಮಾವತಿ, ರಾಜೀವಿ, ಪ್ರೇಮಾ, ಪುತ್ತೂರು ನಗರಠಾಣೆ ಹೆಡ್ ಕಾನ್ಸ್‌ಟೇಬಲ್ ಹೇಮಾವತಿ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸುಬ್ರಹ್ಮಣ್ಯ ಶಾಖಾ ಸಿಬ್ಬಂದಿ ಯಮುನಾ ಕೆ., ಹಾಗೂ ಮೊಮ್ಮಕ್ಕಳಾದ ಜೀವನ್ ಬಿ, ಅನ್ವಿತಾ, ಅಕ್ಷತಾ, ದನ್ವಿತ್, ಯತೀನ್ ಬಿ.ಎಸ್, ಯಶನ್ ಬಿ.ಎಸ್, ರಶ್ಮಿ, ರಕ್ಷಾ, ಶ್ರೀಜಿತ್ ಬಿ.ಎಸ್.ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here