ತಿಂಗಳಾಡಿ ಜಿಸ್ತಿಯಾ ಮದ್ರಸದಲ್ಲಿ ಮುಅಲ್ಲಿಂ ಡೇ ಆಚರಣೆ

0

ತಿಂಗಳಾಡಿ: ಜಿಸ್ತಿಯಾ ಮದ್ರಸ ಇದರ ಆಶ್ರಯದಲ್ಲಿ ಸಮಸ್ತ ಅಧ್ಯಾಪಕರ ದಿನಾಚರಣೆ ಕಾರ್ಯಕ್ರಮ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಪ್ರಧಾನ ಅದ್ಯಾಪಕರಾದ ಅಬ್ದುಲ್ ಸತ್ತಾರ್ ಕೌಸರಿ ಉಸ್ತಾದ್ ರವರು ಮಾತನಾಡಿ ಅದ್ಯಾಪಕರ ಮಹತ್ವ ಹಾಗು ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು. ಮದ್ರಸ ಸಮಿತಿ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಶುಭ ಹಾರೈಸಿ ಮಾತನಾಡಿದರು. ಸಭೆಯಲ್ಲಿ ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್ , ಉಪಾದ್ಯಕ್ಷರಾದ ಮಹಮ್ಮದ್ ಕುಂಞ್ಞಿ ಪಟ್ಟೆ, ಕಾರ್ಯದರ್ಶಿಗಳಾದ ಇಬ್ರಾಹಿಂ ಹಾಜಿ ದರ್ಬೆ , ಅಬ್ದುಲ್ಲ ಪಟ್ಟೆ , ಕೋಶಾಧಿಕಾರಿ ಹಮೀದ್ ದರ್ಬೆ , ಜತೆ ಕಾರ್ಯದರ್ಶಿ ರಝಾಕ್ ಸೊರಕೆ , ಸಮಿತಿ ಸದಸ್ಯರಾದ ಲತೀಫ್ ಆದ್ರೋಡಿ ಹಾಗು ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಸ್ತಾದರಾದ ಸತ್ತಾರ್ ಕೌಸರಿ ಹಾಗು ಸಫ್ವಾನ್ ಇವರನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಗೌರವಾರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here