ಜು.13: ಮುಂಡೂರು ಕೇದಗೆದಡಿ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಕೊರಗಜ್ಜ ದೈವದ ಪ್ರತಿಷ್ಠಾಪನೆಯ ಸಂಭ್ರಮ

0

ಪುತ್ತೂರು : ಇಲ್ಲಿನ ಮುಂಡೂರು ಕೇದಗೆದಡಿ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಜು.13 ರಂದು ತುಳುನಾಡಿನ ಕಾರ್ಣಿಕ ದೈವ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾಪನೆಯೊಂದಿಗೆ ವಿವಿಧ ಪರಿವಾರ ದೈವಗಳ ಪುನರ್ ಪ್ರತಿಷ್ಠಾಪನೆ ಕಾರ್ಯವು ನೆರವೇರಲಿದೆ. ಜು.13 ರ ಬೆಳಿಗ್ಗೆ ಗಂಟೆ 8.51 ರ ಮುಹೂರ್ತದಲ್ಲಿ ಕೇದಗೆದಡಿ ಶ್ರೀ ಕ್ಷೇತ್ರದಲ್ಲಿಕೊರಗಜ್ಜ ದೈವದ ಪ್ರತಿಷ್ಠಾಪನೆ ಮತ್ತು ಪರಿವಾರ ದೈವಗಳ ಪುನ‌ರ್ ಪ್ರತಿಷ್ಠಾಪನೆ ಜರುಗಲಿದ್ದು , ಶ್ರೀ ಗುರುದೇವತಾನುಗ್ರಹದಿಂದ ನಡೆಯುವ ಕಾರ್ಯಕ್ರಮಗಳಿಗೆ ಭಗವದ್ಭಕ್ತರು ಸಕಾಲದಲ್ಲಿ ಆಗಮಿಸಿ, ತನು-ಮನ-ಧನ ಹಾಗೂ ಸರ್ವ ವಿಧದ ಸಹಕಾರಗಳನ್ನಿತ್ತು ಶ್ರೀ ದೈವದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ಕೊರಗಜ್ಜ ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೃಷ್ಣ ನಾಯ್ಕ ಕೇದಗೆದಡಿ ವಿನಂತಿಸಿದ್ದಾರೆ.

ಕಾರ್ಯಕ್ರಮಗಳ ವಿವರ :ಜುಲೈ 13 ಶನಿವಾರ ಬೆಳಿಗ್ಗೆ ಗಂಟೆ 8.00ಕ್ಕೆ ಗಣಹೋಮ ನಡೆಯಲಿದ್ದು , ಬಳಿಕ 8.51ಕ್ಕೆ ಶ್ರೀ ಕೊರಗಜ್ಜ ದೈವದ ಬಿಂಬ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ.

ಬೆಳಿಗ್ಗೆ 10.00ರಿಂದ ಭಜನೆ ಪ್ರಾರಂಭಗೊಂಡು , ಮಧ್ಯಾಹ್ನ 12.00ಕ್ಕೆ ಮಹಾಪೂಜೆ , ಪ್ರಸಾದ ವಿತರಣೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆಯೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಸೇವೆಗಳು : ಕ್ಷೇತ್ರದಲ್ಲಿ ಕೊರಗಜ್ಜ ತಂಬಿಲ ಸೇವೆ ಹಾಗೂ ಪ್ರತಿ ತಿಂಗಳ ಸಂಕ್ರಮಣದಂದು ಸಂಜೆ 4.30 ಕ್ಕೆ ಅಗೇಲು ಸೇವೆಯೂ ಕೂಡ ನಡೆಯುತ್ತದೆ.

LEAVE A REPLY

Please enter your comment!
Please enter your name here