ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಎನ್ಎಸ್ ಯು ಐ ನಿಂದ ಶಾಸಕರಿಗೆ ಮನವಿ

0

ಪುತ್ತೂರು:ಶಾಲಾ ಸಮಯದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲು ಎನ್ಎಸ್ ಯು ಐ ನಿಂದ ಶಾಸಕರಿಗೆ ಮನವಿ ಮಾಡಲಾಯಿತು.ಮನವಿಯಲ್ಲಿ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 08:00 ರಿಂದ 08:15 ಗಂಟೆಯ ಸಮಯದಲ್ಲಿ ಪುತ್ತೂರಿಗೆ ಪ್ರಯಾಣಿಸಲು ಬಸ್‌ನ ಕೊರತೆ ಇದೆ. ಬೆಳಿಗ್ಗೆ 07:45 ರ ಸಮಯದಲ್ಲಿ ಸುಳ್ಯ ತಾಲೂಕಿನ ಪೈಲಾರ್‌ನಿಂದ ಕೊಳ್ತಿಗೆಯ ಮೂಲಕ ಹಾದು ಹೋಗುವ ಬಸ್ಸು ತಲುಪುವಾಗಲೇ ಬಹುತೇಕ ಭರ್ತಿಯಾಗುತ್ತಿದ್ದು, ಈ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಅವಕಾಶ ಸಿಗುವುದಿಲ್ಲ. ಬಸ್ಸು ತುಂಬಿದ ನಂತರ ಮುಂದಿನ ನಿಲ್ದಾಣಗಳಲ್ಲಿ ಬಸ್ಸು ನಿಲ್ಲಿಸದೇ ಮುಂದುವರಿಯುವುದರಿಂದ ಶಾಲೆ, ಕಾಲೇಜುಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ವಾಹನದ ಕೊರತೆಯಿಂದ ಸರಿಯಾದ ಸಮಯಕ್ಕೆ ಕಾಲೇಜು ತಲುಪಲು ವಿಫಲವಾಗಿ ಅವರಿಗೆ ತೊಂದರೆಯಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 08:00 ರಿಂದ 08:15 ರ ಸಮಯದಲ್ಲಿ ಬಸ್ಸಿನ ವ್ಯವಸ್ಥೆ ಮಾಡಿಕೊಡಬೇಕೆಂದು‌ ಮನವಿಯಲ್ಲಿ ತಿಳಿಸಲಾಗಿದೆ.


ಎನ್.ಎಸ್.ಯು.ಐ, ಪುತ್ತೂರು ಪ್ರಧಾನ ಕಾರ್ಯದರ್ಶಿ ರೂಪ್ ರಾಜ್‌ಮೊಗಪ್ಪೆ,ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ಪಾಂಬಾರ್ , ಎನ್ ಎಸ್ ಯು ಐ ಸಾಮಾಜಿಕ ಜಾಲತಾಣದ ನವೀನ್ ಬನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here