ಬೆಟ್ಟಂಪಾಡಿ: ನವೋದಯ ಪ್ರೌಢಶಾಲಾ ಶಿಕ್ಷಕ-ರಕ್ಷಕ ಸಂಘ ರಚನೆ

0

ಅಧ್ಯಕ್ಷರಾಗಿ ಗಣೇಶ್‌ ರೈ, ಉಪಾಧ್ಯಕ್ಷರಾಗಿ ಶೋಭಾ, ಜುಬೈದಾ, ರಾಮ್‌ಪ್ರಸಾದ್‌

ಬೆಟ್ಟಂಪಾಡಿ: ಇಲ್ಲಿನ ನವೋದಯ ಪ್ರೌಢಶಾಲೆಯ ಶಿಕ್ಷಕ-ರಕ್ಷಕ ಸಂಘದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ನೂತನ ಅಧ್ಯಕ್ಷರಾಗಿ ಗಣೇಶ್‌ ರೈ, ಉಪಾಧ್ಯಕ್ಷರಾಗಿ ಶೋಭಾ, ಜುಬೈದಾ, ರಾಮ್‌ಪ್ರಸಾದ್‌, ಸದಸ್ಯರಾಗಿ ವೆಂಕಪ್ಪ ನಾಯ್ಕ, ಶೇಷಪ್ಪ ನಾಯ್ಕ, ಹಮೀದ್‌ ಬೆಟ್ಟಂಪಾಡಿ, ಮಮತಾ, ಝೀನತ್‌, ಬಾಬು ನಾಯಕ್‌, ಚಂದ್ರಾವತಿ, ಸೌಮ್ಯ, ಸೌಮ್ಯಲತಾ, ಮಂಜುನಾಥ, ದೇವಣ್ಣ ನಾಯ್ಕ, ಜಲಜಾಕ್ಷಿ, ದಾಜಮ್ಮ ಹಾಗೂ ಜೆನಿತ್‌ ಆಯ್ಕೆಯಾದರು. ಸುರಕ್ಷಾ ಸಮಿತಿಗೆ ವೆಂಕಪ್ಪ ನಾಯ್ಕ, ಶರ್ಮಿಳಾ, ರುಕಿಯಾ, ಮೀನಾಕ್ಷಿ, ವನಿತಾ ರತ್ನಾ ಆಯ್ಕೆಯಾದರು. ಮಾತೆಯರ ಸಂಘಕ್ಕೆ ಲಕ್ಷ್ಮೀ, ಫಾತಿಮಾ, ಪ್ರೀತಿ, ಸವಿತಾ, ವೇದಾವತಿ ಹಾಗೂ ಸುಂದರಿ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಬಾಲಕೃಷ್ಣ ಭಟ್‌ ಘಾಟೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಸಹಕಾರವನ ನಾರಾಯಣ ಭಟ್‌ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಪುಷ್ಪಾವತಿ ಎಸ್‌. ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಹಿಂದಿ ಭಾಷಾ ಶಿಕ್ಷಕಿ ಪ್ರವೀಣ ಕುಮಾರಿ ವಂದಿಸಿದರು. ಸಹ ಶಿಕ್ಷಕಿ ಶೋಭಾ ಬಿ. ನಿರೂಪಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಬಗ್ಗೆ ಸಹಶಿಕ್ಷಕಿ ಸುಮಂಗಲಾ ಕೆ. ಮತ್ತು ಎನ್‌ಎಂಎಂಎಸ್‌ ಪರೀಕ್ಷೆ ಕುರಿತು ಸಹಶಿಕ್ಷಕಿ ಭುವನೇಶ್ವರಿ ಎಂ. ಮಾಹಿತಿ ನೀಡಿದರು. ಸಹಶಿಕ್ಷಕರಾದ ರಾಧಾಕೃಷ್ಣ ಆರ್.‌ ಮತ್ತು ಗೌತಮಿ, ಶಿಕ್ಷಕೇತರ ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here