ನಿಡ್ಪಳ್ಳಿ ಪಟ್ಟೆಯಲ್ಲಿ ಬರೆ ಕುಸಿದು ತೋಡು ಬಂದ್. ಬಿತ್ತಿದ ಗದ್ದೆಗೆ ನೀರು ನುಗ್ಗಿ  ನಾಶ.

0

ನಿಡ್ಪಳ್ಳಿ: ಇಲ್ಲಿಯ ಪಟ್ಟೆ ಎಂಬಲ್ಲಿ ಬರೆ ಕುಸಿದ ಪರಿಣಾಮ ತೋಡು ಬಂದ್ ಆದ ಘಟನೆ ಅ.1ರಂದು ನಡೆದಿದೆ.

ಬರೆ ಕುಸಿದು ತೋಡು ಬ್ಲಾಕ್ ಆದ ಕಾರಣ ಗದ್ದೆ ಬದಿ ಕಟ್ಟಪುಣಿ ಕಡಿದು ಉಳುಮೆ ಮಾಡಿ ನಿನ್ನೆ ತಾನೆ ಬಿತ್ತಿದ ಗದ್ದೆಗೆ ನೀರು ಹರಿಯುತ್ತಿದ್ದು ಬಿತ್ತಿದ ಬೀಜ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟ ಸಂಭವಿಸಿದೆ. ಬಾಜಿಲ್ ಡಿ’ ಸೋಜಾ, ಇನಾಸ್ ಡಿ ‘ಸೋಜಾ, ದೂಜ ಡಿ’ ಸೋಜಾ, ಅಂತೋನಿ ಡಿ’ ಸೋಜಾ ಹಾಗೂ ಜಾನಕಿ ಎಂಬವರಿಗೆ ಸೇರಿದ ಗದ್ದೆ ತುಂಬಾ ನೀರು ತುಂಬಿದೆ.ಅಲ್ಲದೆ ಬರೆ ಇನ್ನೂ ಜರಿದು ಬೀಳುವ ಸಂಭವ ಇದ್ದು ಬರೆ ಸಮೀಪ  ಜಾನಕಿಯವರ ಮನೆ ಇದ್ದು ಅತಂಕಕಾರಿಯಾಗಿದೆ. 
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಿಡಿಒ ಸಂಧ್ಯಾಲಕ್ಷ್ಮೀ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here