ಕಾವ್ಯ ಚೇತನ ಪ್ರಶಸ್ತಿಗೆ ವಿಂಧ್ಯಾ ಎಸ್ ರೈ ಕಡೇಶಿವಾಲಯ ಆಯ್ಕೆ

0

ವಿಟ್ಲ: ತ್ರಿಭಾಷೆಗಳ ಬರಹದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಹಲವು ಮೈಲಿಗಲ್ಲನ್ನು ಸಾಧಿಸಿದ ಯುವ ಸಾಹಿತಿಯಾದ ವಿಂಧ್ಯಾ ಎಸ್ ರೈ ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಆಯೋಜಿಸಿರುವ ಪುಸ್ತಕ ಹಬ್ಬ ಹಾಗೂ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ‘ಕಾವ್ಯ ಚೇತನ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯನ್ನು ಆ. 18 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಇವರ ಹೆಸರು ವಲ್ಡ್ ಪ್ರೆಸ್ ಬುಕ್ ಆಪ್ ರೆಕಾರ್ಡ್ನಲ್ಲೂ ದಾಖಲಾಗಿದೆ. ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಬಹುಮುಖ ಪ್ರತಿಭಾನ್ವಿತೆಯಾಗಿದ್ದು ಇತ್ತೀಚೆಗೆ ನಡೆದ ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯ ವೇದಿಕೆಯ ಚುನಾವಣೆಯಲ್ಲಿ ವಿಜೇತರಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.ಇವರು ಕುರುಂಬ್ಲಾಜೆಗುತ್ತು ಸುಂದರ ರೈರವರ ಪತ್ನಿ

LEAVE A REPLY

Please enter your comment!
Please enter your name here