ವಯನಾಡು ದುರಂತ: ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಸಂತ್ರಸ್ತರಿಗಾಗಿ ಮೊಂಬತ್ತಿ ಪ್ರಾರ್ಥನೆ

0

ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ ಮೃತಪಟ್ಟವರಿಗಾಗಿ ಮತ್ತು ಸಂತ್ರಸ್ತರಿಗಾಗಿ ವಿಶೇಷ ಪೂಜಾ ವಿಧಿಗಳನ್ನು ನಡೆಸಲಾಯಿತು. ಧರ್ಮಗುರು ಫಾ. ಶಾಜಿ ಮಾತ್ಯು ಸಂತಾಪ ಸೂಚಿಸಿ ಮಾತನಾಡಿದರು.

ಸುಮಾರು ನೂರೈತ್ತಕ್ಕಿಂತ ಹೆಚ್ಚು ಮಕ್ಕಳು ಮೊಂಬತ್ತಿಗಳನ್ನು ಹಿಡಿದು ಕ್ಯಾಂಡಲ್ ಲೈಟ್ ಪ್ರಾರ್ಥನೆಯನ್ನು ಮಾಡಿದರು. ಮಕ್ಕಳಲ್ಲಿ ಸಾಮಾಜಿಕ ಬದ್ಧತೆ, ಕಷ್ಟದಲ್ಲಿರುವವರಿಗೆ ಸಹಾಯ, ಅನುಕಂಪ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನವಾಗಿ ಇದನ್ನು ಆಯೋಜಿಸಲಾಗಿತ್ತು. ಶಿಕ್ಷಕ ರೊಯ್ ಕೊಳಂಗರಾತ್, ಜೆನಿನ್, ಶ್ರೀ ತೋಮಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here