ಹೊಸಮಜಲು: ಗ್ರಾಮಾಭಿವೃದ್ಧಿ ಯೋಜನೆ ಸಭೆ, ಸನ್ಮಾನ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ಇದರ ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಹಾಗೂ ವಲಯದ ಎಲ್ಲಾ ಒಕ್ಕೂಟಗಳ ಅಧ್ಯಕ್ಷರ, ಸೇವಾಪ್ರತಿನಿಧಿಗಳ ಸಭೆ ಆ.6ರಂದು ವಲಯ ಮೇಲ್ವಿಚಾರಕರ ಉಪಸ್ಥಿತಿಯಲ್ಲಿ ಕೌಕ್ರಾಡಿ ಹೊಸಮಜಲು ಕಲಿಕಾ ಕೇಂದ್ರದಲ್ಲಿ ನಡೆಯಿತು.


ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದು, ಆ.22ರಂದು ಸವಣೂರಿನಲ್ಲಿ ನಡೆಯುವ ಮದ್ಯವರ್ಜನ ಶಿಬಿರಕ್ಕೆ ಎಲ್ಲರ ಸಹಕಾರ ಬೇಕು ಎಂದರು. ಕಳೆದ ಮೂರು ವರ್ಷಗಳಿಂದ ನೆಲ್ಯಾಡಿ ವಲಯದಲ್ಲಿ ಮೇಲ್ವಿಚಾರಕರಾಗಿದ್ದ ವಿಜೇಶ್ ಜೈನ್‌ರವರು ವರ್ಗಾವಣೆಯಾಗಿ ಕಡಬ ವಲಯಕ್ಕೆ ಹೋಗಲಿದ್ದು ಅವರು ನೆಲ್ಯಾಡಿ ವಲಯದಲ್ಲಿ ಪ್ರಾಮಾಣಿಕವಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು.


ಮೇಲ್ವಿಚಾರಕರಿಗೆ ಗೌರವಾರ್ಪಣೆ:
ಕಡಬ ವಲಯಕ್ಕೆ ವರ್ಗಾವಣೆಗೊಂಡ ಮೇಲ್ವಿಚಾರಕ ವಿಜೇಶ್ ಜೈನ್‌ರವರನ್ನು ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸದಸ್ಯರಾದ ತುಕಾರಾಮ ರೈ, ನೆಲ್ಯಾಡಿ ಶೌರ್ಯ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು, ವಲಯದ ಒಕ್ಕೂಟಗಳ ಅಧ್ಯಕ್ಷರು ಫಲ ಪುಷ್ಪ ನೀಡಿ ಗೌರವಿಸಿದರು. ನೆಲ್ಯಾಡಿ ವಲಯಕ್ಕೆ ಮೇಲ್ವಿಚಾರಕರಾಗಿ ಆಗಮಿಸಿದ ಆನಂದರವರನ್ನು ಅಭಿನಂದಿಸಲಾಯಿತು. ಸೇವಾಪ್ರತಿನಿಧಿ ವೇದ ಪಿ ಕಾರ್ಯಕ್ರಮ ನಿರೂಪಿಸಿದರು. ಹೇಮಾವತಿ ಜೆ ಸ್ವಾಗತಿಸಿ, ಸುಮನಾ ವಂದಿಸಿದರು.

LEAVE A REPLY

Please enter your comment!
Please enter your name here