ಸವಣೂರು ಬಿಜೆಪಿ ಶಕ್ತಿ ಕೇಂದ್ರ ಪ್ರಮುಖ್ ಆಗಿ ಚೇತನ್ ಕೋಡಿಬೈಲು -ಬೂತ್ 65 ರ ಅಧ್ಯಕ್ಷರಾಗಿ ತೀರ್ಥರಾಮ ಕೆಡೆಂಜಿ, ಕಾರ್ಯದರ್ಶಿಯಾಗಿ ಸತೀಶ್ ಬಲ್ಯಾಯ

0

ಸವಣೂರು : ಬಿಜೆಪಿ ಸವಣೂರು ಶಕ್ತಿ ಕೇಂದ್ರ ಪ್ರಮುಖ್ ಆಗಿ ಚೇತನ್ ಕುಮಾರ್ ಕೋಡಿಬೈಲು ಅವರು ಆಯ್ಕೆಯಾಗಿದ್ದಾರೆ.ಬೂತ್65ರ ಅಧ್ಯಕ್ಷರಾಗಿ ಸವಣೂರು ಗ್ರಾ.ಪಂ.ಸದಸ್ಯ ತೀರ್ಥರಾಮ ಕೆಡೆಂಜಿ, ಕಾರ್ಯದರ್ಶಿಯಾಗಿ ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಬಲ್ಯಾಯ ಅವರನ್ನು ಆಯ್ಕೆ ಮಾಡಲಾಯಿತು.

ಸವಣೂರು ಯುವ ಸಭಾಭವನದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.

ಬಿಎಲ್.ಎ 2 ಆಗಿ ಕೀರ್ತನ್ ಕೋಡಿಬೈಲು, ಮತಗಟ್ಟೆ ಏಜೆಂಟ್ ಆಗಿ ಪ್ರಕಾಶ್ ಕುದ್ಮನಮಜಲು,ಮಹಿಳಾ ಸದಸ್ಯರಾಗಿ ಅನಿತಾ ಲಕ್ಷ್ಮಣ ಗೌಡ,ಎಸ್.ಸಿ.ಸದಸ್ಯರಾಗಿ ಗಿರೀಶ್ ಬೇರಿಕೆ, ಎಸ್.ಟಿ.ಸದಸ್ಯರಾಗಿ ಗಿರೀಶ್ ಬೇರಿಕೆ, ಓ.ಬಿ.ಸಿ.ಸದಸ್ಯರಾಗಿ ಗಂಗಾಧರ ಸುಣ್ಣಾಜೆ, ಸದಸ್ಯರಾಗಿ ಅಶ್ವಿನ್ ಎಲ್.ಶೆಟ್ಟಿ, ಉಮೇಶ್ ಆಚಾರ್ಯ, ಪ್ರಜ್ವಲ್ ಕೆ.ಆರ್.,ರಾಮಕೃಷ್ಣ ಪ್ರಭು,ಪದ್ಮಯ್ಯ ಗೌಡ ಪರಣೆ,ಸುರೇಶ್ ರೈ ಸೂಡಿಮುಳ್ಳು, ಚಂದ್ರಾವತಿ ಸುಣ್ಣಾಜೆ,ಜಯಶ್ರೀ ಬಾರಿಕೆ,ವೇದಾವತಿ ಬೇರಿಕೆ, ರಾಜೀವಿ ಶೆಟ್ಟಿ, ಜಗದೀಶ್ ಆರೇಲ್ತಡಿ, ಸುಪ್ರಿತ್ ರೈ ಖಂಡಿಗ,ಬಾಲಚಂದ್ರ ಕೆ.,ಗಣೇಶ್ ನಾಯ್ಕ,ಕೇಶವ ಬಸ್ತಿ,ಇಂದಿರಾ ಬೇರಿಕೆ, ಗೋಪಾಲಕೃಷ್ಣ ಗೌಡ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರಾನಾಥ ಕಾಯರ್ಗ,ಬೂತ್65ರ ಅಧ್ಯಕ್ಷ ಪ್ರಜ್ವಲ್ ಕೆ.ಆರ್,ಎಸ್.ಟಿ.ಮೋರ್ಚಾ ಸುಳ್ಯ ಮಂಡಲ ಅಧ್ಯಕ್ಷ ಗಂಗಾಧರ ಪೆರಿಯಡ್ಕ,ಕಾರ್ಯದರ್ಶಿ ರಾಜೀವಿ ಶೆಟ್ಟಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here