ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಚಂದ್ರಶೇಖರ ಪೂಜಾರಿ ನಿಧನ

0

ಪುತ್ತೂರು:  ಕೆದಂಬಾಡಿ ಗ್ರಾಮದ ಕಟ್ಟತ್ತಾರು ನಿಡ್ಯಾಣ ನಿವಾಸಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಚಂದ್ರಶೇಖರ ಪೂಜಾರಿ ಎಮ್ (61ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಆ.10 ರಂದು ನಿಧನರಾದರು.

ಇವರು 35 ವರ್ಷಗಳ ಕಾಲ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದು 10 ವರ್ಷಗಳ ಕಾಲ ಪುತ್ತೂರು ಬ್ರ್ಯಾಂಚ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. 

ಮೃತರು ಪತ್ನಿ ನೀಲಾವೇಣಿ, ಪುತ್ರ ಪ್ರಜ್ವಲ್ ಎಂ.ಸಿ, ಪುತ್ರಿ ಪ್ರತೀಕ್ಷಾ ಎಂ ಸಿ, ಸಹೋದರರಾದ ವಾಸುದೇವ ಪೂಜಾರಿ,ಸುಂದರ ಪೂಜಾರಿ,ಸಹೋದರಿ ಜಲಜಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here