ಚೆಸ್ -ಅಂಬಿಕಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಪುತ್ತೂರು ವಿದ್ಯಾ ಭಾರತಿ ಹಾಗೂ ಅಲಂಕಾರು ಭಾರತಿ ಪದವಿ ಪೂರ್ವ ವಿದ್ಯಾಲಯದ ಸಹಯೋಗದಲ್ಲಿ ಆಗಸ್ಟ್ 13ರಂದು ನಡೆದ 19 ವರ್ಷ ವಯೋಮಾನದ ಒಳಗಿನ ಚೆಸ್ ಪಂದ್ಯಾಟದಲ್ಲಿ ಪುತ್ತೂರಿನ ನಟ್ಟೋಜ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ, ಹಾರಾಡಿಯ ದಾಮೋದರ ಎನ್ ಮತ್ತು ನವೀನ ಕುಮಾರಿ ಕೆ ಎಸ್ ದಂಪತಿ ಪುತ್ರ ತ್ರಿಶೂಲ್ ಎನ್ ಡಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಹಾಗೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೆಹರುನಗರದ ರೋಹಿತಾಕ್ಷ ಕೆ ಮತ್ತು ಆರತಿ ರೈ ದಂಪತಿ ಪುತ್ರ ಅಕ್ಷಯ್ ರೈ ಐದನೇ ಸ್ಥಾನ ಪಡೆದಿರುತ್ತಾರೆ. ಇವರಿಬ್ಬರು ದಕ್ಷಿಣ ಕನ್ನಡವನ್ನು ಪ್ರತಿನಿಧಿಸುವ ತಂಡದಿಂದ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here