ಆಡಿಯೋ ವೈರಲ್ ಹಿನ್ನಲೆ – ಬೆದರಿಕೆ ಕರೆ ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಲೇರಿದ ಮಹಿಳೆ

0

ಭದ್ರತೆಯೊಂದಿಗೆ ಮನೆಗೆ ಬಿಟ್ಟು ಬಂದ ಪೊಲೀಸರು !

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಅವರ ಜೊತೆ ಸಂಭಾಷಣೆಯ ಆಡಿಯೋ ವೈರಲ್ ಗೆ ಸಂಬಂಧಿಸಿ ಬೆದರಿಕೆ ಕರೆ ಬರುತ್ತಿರುವುದಾಗಿ ಆರೋಪಿಸಿ ಮಹಿಳೆ ಆ.29 ರ ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಯ ಮೆಟ್ಟಲೇರಿದ್ದಾರೆ. ಮಹಿಳೆ ಜೊತೆ ರಾಜಾರಾಮ ಭಟ್ ಅವರು ಕೂಡಾ ಬಂದಿದ್ದರೆನ್ನಲಾಗಿದೆ.

ಅಡಿಯೋ ವೈರಲ್ ಬೆನ್ನಲ್ಲೆ ಸದ್ಯ ಪುತ್ತೂರಿನಲ್ಲೇ ವಾಸ್ತವ್ಯ ಹೊಂದಿರುವ ಮಹಿಳೆಗೆ ಹಲವಾರು ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.ಈ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಗೆ ರಾತ್ರಿ ಬಂದು ಪೊಲೀಸ್ ಇನ್ ಸ್ಪೆಕ್ಟರ್ ಜೊತೆ ಮಾತುಕತೆ ನಡೆಸಿದ್ದಾರೆ. ಮಹಿಳೆ ಜೊತೆಯಲ್ಲಿ ಮಹಿಳೆಯ ಪುತ್ರಿ ಮತ್ತು  ರಾಜಾರಾಮ ಭಟ್ ಅವರು ಇದ್ದರು ಎಂದು ತಿಳಿದು ಬಂದಿದೆ.

ರಾತ್ರಿ ಮಹಿಳೆಗೆ ಭದ್ರತೆ ನೀಡಿದ ಪೊಲೀಸರು
ತಡ ರಾತ್ರಿ ಠಾಣೆಗೆ ಬಂದ ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ತೆರಳುವಂತೆ ಸೂಚಿಸಿದ ಪೊಲೀಸರು ಹಿಂದಿನಿಂದ ಪೊಲೀಸ್ ಜೀಪಿನಲ್ಲಿ ಮನೆಯ ತನಕ ಭದ್ರತೆ ನೀಡಿದ್ದಾರೆ.

LEAVE A REPLY

Please enter your comment!
Please enter your name here