ಅಡ್ಯಾಲುವಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆ

0

ವಿಟ್ಲ: ಅಡ್ಯಾಲು ಮೊಸರು ಕುಡಿಕೆ ಸಮಿತಿ ಮತ್ತು ಯುವ ಫ್ರೆಂಡ್ಸ್ ಕಬಕ ಇವರ ಸಹಕಾರದೊಂದಿಗೆ ಕುಳ ಗ್ರಾಮದ ಅಡ್ಯಾಲುವಿನಲ್ಲಿ 15ನೇ ವರ್ಷದ ಮೊಸರು ಕುಡಿಕೆ ಉತ್ಸವ ವಿವಿಧ ಆಟೋಟ ಸ್ಪರ್ಧೆಗಳು, ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಕುಣಿತ ಭಜನೆ ನಡೆಯಿತು.

ಪ್ರಮುಖರಾದ ಮೋಹನ್‌ ಗುರ್ಜಿನಡ್ಕ, ಸಂಜೀವ ಪೆಲತ್ತಿಂಜ, ಯುವಜನ ಒಕ್ಕೂಟದ ಅಧ್ಯಕ್ಷರಾದ ದಿನೇಶ್ ಸಾಲಿಯಾನ್, ಆನಂದ ಪೂಜಾರಿ ಅಡ್ಯಾಲು, ಜಯ ಪೂಜಾರಿ ಅಡ್ಯಾಲು, ಚಂದ್ರಕಾಂತ ಅಡ್ಯಾಲು, ಉಮಾ ಆಚಾರ್ಯ ಅಡ್ಯಾಲು, ಶಾರದಾ ಅಡ್ಯಾಲು, ಪ್ರಶಾಂತ್ ಕೇದಾರ ಕರ್ಗಲ್ಲು ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಳಿಗೆ ಕಾರ್ಯಕ್ರಮವನ್ನು ಜಯ ಪೂಜಾರಿ ಅಡ್ಯಾಲು ದೀಪ ಬೆಳಗಿಸಿ ಉದ್ಘಾಟಿಸಿದರು. ಸೂರ್ಯ ಕೋಟ್ಯಾನ್ ಬನ್ನೂರು, ರವಿ ಕರ್ಗಲ್ಲು, ದೀಪಾ ಅಡ್ಯಾಲು ಉಪಸ್ಥಿತರಿದ್ದರು.
ಹರೀಶ್ ಕುಮಾರ್, ಅಶಿಕ್ ಅಡ್ಯಾಲು, ಸುಧಾಕರ ಬನ್ನೂರು ಕರ್ಗಲ್ಲು, ಪೂವಪ್ಪ ಅಡ್ಯಾಲು, ಸಹಕರಿಸಿದರು. ಕೇಶವತಿ ಕರ್ಗಲ್ಲು, ವಿಜಯಶ್ರೀ ಕರ್ಗಲ್ಲು, ಉಮಾವತಿ ಕರ್ಗಲ್ಲು, ಪ್ರಾರ್ಥಿಸಿದರು.
ಪ್ರಶಾಂತ್ ಕರ್ಗಲ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here