ಸೆ.8:ಮಹಾಬಲ-ಲಲಿತ ಕಲಾ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

0

ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ಆಶ್ರಯದಲ್ಲಿ ಜೈನ ಭವನದಲ್ಲಿ ಸೆ.8ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಸಂಜೆಯಿಂದ ಜರಗಲಿದೆ.
ಮೊದಲಿಗೆ ಯುವ ಸಂಗೀತ್ ಕಾರ್ಯಕ್ರಮ ಜರಗಲಿದ್ದು ಗಾಯನವನ್ನು ಕು.ಸುಪ್ರೀತ,ವಯೊಲಿನ್ ನಲ್ಲಿ ಕು.ಮಹತಿ, ಮೃದಂಗದಲ್ಲಿ ಪವನ್ ಕುಮಾರ್, ಬಳಿಕ ನಡೆಯುವ ಸಂಗೀತ ಕಛೇರಿ ಕಾರ್ಯಕ್ರಮದಲ್ಲಿ ವಿದ್ಯಾನ್ ಜೆ.ಬಿ ಶ್ರುತಿಸಾಗರ್ ಚೆನ್ನೈರವರು ಕೊಳಲು ವಾದನವನ್ನು, ವಯೋಲಿನ್ ನಲ್ಲಿ ವಿದ್ವಾನ್ ಎಲ್.ರಾಮಕೃಷ್ಣನ್ ಚೆನ್ನೈ, ಮೃದಂಗಮ್ ನಲ್ಲಿ ವಿದ್ವಾನ್ ಎನ್.ಸಿ ಭಾರದ್ವಾಜ್ ಚೆನ್ನೈ, ಘಟಂನಲ್ಲಿ ವಿದ್ವಾನ್ ವಾಳಂಪಲ್ಲಿ ಕೃಷ್ಣಕುಮಾರ್ ರವರು ಮನರಂಜನೆ ನೀಡಲಿರುವರು. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಮಹಾಬಲ ಲಲಿತಾ ಕಲಾ ಸಭಾದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here