ಕೆದಂಬಾಡಿ ಅಮೆಕ್ಕಾರ್‌ಗುತ್ತು ಸಂಜೀವ ರೈ ನಿಧನ

0

ಪುತ್ತೂರು: ಕೆದಂಬಾಡಿ ಗ್ರಾಮದ ಕೆದಂಬಾಡಿಗುತ್ತು ನಿವಾಸಿಯಾಗಿದ್ದ ಅಮೆಕ್ಕಾರ್‌ಗುತ್ತು ಸಂಜೀವ ರೈ (72ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.11 ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಪ್ರಗತಿಪರ ಕೃಷಿಕರಾಗಿದ್ದು ಅಲ್ಲದೆ ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದ ಸಕ್ರೀಯ ಕಾರ್ಯಕರ್ತರಾಗಿದ್ದರು. ಭಜನಾ ಮಂದಿರದಲ್ಲಿ ನಡೆಯುವ ವಾರದ ಭಜನಾ ಕಾರ್ಯಕ್ರಮ ಹಾಗೇ ನಗರದ ಭಜನೆಯ ಸಂದರ್ಭದಲ್ಲಿ ದೇವರ ಪೂಜಾ ಕಾರ್ಯ, ಭಜನಾ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದರು.


ಮೃತರು ಪುತ್ರರಾದ ಕಿರಣ್ ರೈ, ಪದ್ಮನಾಭ ರೈ, ಪುತ್ರಿ ಮಮತಾ, ಸೊಸೆಯಂದಿರಾದ ಲತಾ, ಪ್ರತಿಮಾ,ಸಹೋದರರುಗಳಾದ ನಾರಾಯಣ ರೈ ಮಿತ್ತೋಡಿ, ಸುಬ್ಬಯ್ಯ ರೈ ಮಿತ್ತೋಡಿ, ಸೀತಾರಾಮ ರೈ ಮಿತ್ತೋಡಿ, ಲಿಂಗಪ್ಪ ರೈ ಮಿತ್ತೋಡಿ, ಚೆನ್ನಮ್ಮ ರೈ ಮಿತ್ತೋಡಿ, ಪ್ರಮೀಳಾ ರೈ ಮಿತ್ತೋಡಿ ಸೇರಿದಂತೆ ಅಪಾರ ಬಂಧು ಬಳಗ, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here