ಕೆದಂಬಾಡಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ಪುತ್ತೂರು: ಬಿಜೆಪಿ ಕೆದಂಬಾಡಿ 186 ಬೂತ್ ಸಮಿತಿ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಯಿತು. ಸಭೆಯು ಬೂತ್ ಅಧ್ಯಕ್ಷರಾದ ಸೀತಾರಾಮ ಗೌಡ ಇವರ ಅಧ್ಯಕ್ಷತೆಯಲ್ಲಿ ಬಾಲಕೃಷ್ಣ ರೈ ಕುಂಬ್ರ ಇವರ ನಿವಾಸದಲ್ಲಿ ನಡೆಯಿತು.

ಬೂತ್ ಸದಸ್ಯತ್ವ ಅಭಿಯಾನದ ಸಂಯೋಜಕರಾಗಿ ನೇಮಿರಾಜ್ ರೈ ಕುರಿಕ್ಕಾರ ಹಾಗೂ ಸಹ ಸಂಯೋಜಕರಾಗಿ ರಕ್ಷಿತ್ ಗೌಡ ಇದ್ಯಪ್ಪೆ ಆಯ್ಕೆಯಾದರು. ಬೂತ್ ಮನ್ ಕೀ ಬಾತ್ ಸಂಯೋಜಕರಾಗಿ ಸ್ವಸ್ತಿಕ್ ರೈ ಕುಯ್ಯಾರು ಇವರನ್ನು ನೇಮಿಸಲಾಯಿತು. 

ಸಭೆಯಲ್ಲಿ ಗ್ರಾಮಾಂತರ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ, ಶಕ್ತಿಕೇಂದ್ರ ಸಂಚಾಲಕರಾಗಿ ಶರತ್ ಗೌಡ, ಶಕ್ತಿಕೇಂದ್ರ ಪೂರ್ವ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ತಾರಾನಾಥ ರೈ ಕುರಿಕ್ಕಾರ, ಉದಯ ಇದ್ಯಪ್ಪೆ,  ಮೋಕ್ಷಿತ್ ಇದ್ಯಪ್ಪೆ, ಮಹೇಶ್ ಇದ್ಯಪ್ಪೆ, ಸಂತೋಷ್ ಕುರಿಕ್ಕಾರ ಉಪಸ್ಥಿತರಿದ್ದರು. ಬೂತ್ ಕಾರ್ಯದರ್ಶಿ ಚಂದ್ರ ಇದ್ಪಾಡಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here