ಸೂರಂಬೈಲು ಶಾಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

0

ನಿಡ್ಪಳ್ಳಿ; ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಗಮನಾರ್ಹ ಸಾಧನೆ ಮಾಡಿದ ಗ್ರಾಮೀಣ ಪ್ರದೇಶದ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸೂರಂಬೈಲು ಪಾಣಾಜೆ ಇಲ್ಲಿನ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. 

ಈ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಲ್ಲದಿದ್ದರೂ ವಿದ್ಯಾರ್ಥಿಗಳಿಗೆ ತರಬೇತು ನೀಡಿದ ರಾಜ್ಯಮಟ್ಟದ ಕಬಡ್ಡಿ ಆಟಗಾರರಾದ  ವಸಂತ ಪಿದಾರ ಆರ್ಲಪದವು ಮತ್ತು  ಗೀತಾ ದೇವಸ್ಯ ಇವರನ್ನು ಓಂ ಫ್ರೆಂಡ್ಸ್ ಭರಣ್ಯ ಇದರ ವತಿಯಿಂದ ಅಭಿನಂದಿಸಲಾಯಿತು.

  ಎಸ್.ಡಿ.ಯಂ ಸಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಸೂರ್ಯಂಬೈಲು, ಓಂ ಫ್ರೆಂಡ್ಸ್ ಭರಣ್ಯ ಇದರ ಅಧ್ಯಕ್ಷ ವಸಂತ ಭರಣ್ಯ ಸದಸ್ಯರಾದ ಪ್ರದೀಪ್ ಪಾಣಾಜೆ ತರಬೇತುದಾರರಾದ ವಸಂತ ಪಿದಾರ ,ಗೀತಾ ದೇವಸ್ಯ ,ಶಾಲಾ ಮುಖ್ಯ ಗುರು  ಉರ್ಮಿಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಕುಮಾರಿ ಪವಿತ್ರಾ ಸ್ವಾಗತಿಸಿದರು. ಸಹಶಿಕ್ಷಕ ನಾಗೇಶ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿಯರಾದ  ಸುಪ್ರೀತಾ ಮತ್ತು ಕುಮಾರಿ ವಿದ್ಯಾ, ಗೌರವ ಶಿಕ್ಷಕಿ ಕುಮಾರಿ ಯಶಸ್ವಿನಿ ಸಹಕರಿಸಿದರು.

LEAVE A REPLY

Please enter your comment!
Please enter your name here