ಈದ್ ಮಿಲಾದ್ ಪ್ರಯುಕ್ತ ಈಶ್ವರಮಂಗಲದಲ್ಲಿ ಆಕರ್ಷಕ ವಾಹನ ಜಾಥಾ – ನೂರಾರು ಮಂದಿ ಭಾಗಿ

0

ಪುತ್ತೂರು: ಈಶ್ವರಮಂಗಲ ಸಂಯುಕ್ತ ಮೀಲಾದ್ ಕಮಿಟಿ ವತಿಯಿಂದ ವಾಹನ ಜಾಥಾ ನಡೆಯಿತು.
ಮೇನಾಲ ಜಂಕ್ಷನ್‌ನಲ್ಲಿ ಸಂಜೆ ಮೀಲಾದ್ ಕಮಿಟಿ ಗೌರವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲರವರು ಮೀಲಾದ್ ಕಮಿಟಿ ಅಧ್ಯಕ್ಷ ತ್ವಾಹ ಪಿ.ಎಸ್ ರವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು.


ಮಿಲಾದ್ ಕಮಿಟಿ ಗೌರವ ಸಲಹೆಗಾರರಾದ ಲತೀಫ್ ಕೆ.ಎ, ಇಬ್ರಾಹಿಮ್ ಪಿ.ಎಮ್, ಕೋಶಾಧಿಕಾರಿ ಸಲಾಂ ಪದಡ್ಕ, ಸಂಘಟನಾ ಕಾರ್ಯದರ್ಶಿಗಳಾದ ಅಜರ್ ಸುಲ್ತಾನ್ ನಗರ, ನೌಫಲ್ ಬಿ.ಸಿ, ತ್ವಾಹ ಬಿಸಿ,ಜಿಸಿಸಿ ಗೇಮರ್ಸ್ ದುಬೈ ಇದರ ಚೇರ್’ಮೆನ್ ಯೂಸುಫ್ ಹಾಜಿ ಪಟ್ರೋಡಿ, ಮೀಲಾದ್ ಕಮಿಟಿ ಪದಾಧಿಕಾರಿಗಳಾದ ಸವಾದ್ ಮೇನಾಲ, ರಹಮಾನ್ ಮೇನಾಲ, ಅಬ್ಬು ಮೇನಾಲ, ಮುಸ್ತಫ ಕಾರ್‌ಸೂಕ್, ಸಂಶುದ್ದೀನ್ ಈಂದುಮೂಲೆ, ಸಂಶುದ್ದೀನ್ ಪದಡ್ಕ, ಹನೀಫ್ ಅಬ್ಕೋ, ಸಾದಿಕ್ ಪಡಪ್ಪು, ಜಮಾಲ್ ಬಿ.ಸಿ, ಉಮ್ಮರ್ ಸುಲ್ತಾನ್ ನಗರ, ಅಝೀಝ್ ಸಿ.ಹೆಚ್ ಮತ್ತಿತರ ಹಲವಾರು ಮಂದಿ ಬೃಹತ್ ರ‍್ಯಾಲಿಯು ಈಶ್ವರಮಂಗಲ ಮುಖ್ಯ ರಸ್ತೆಯಾಗಿ ಸಾಗಿ ಮಾಡನ್ನೂರು ಮಸೀದಿ ಪರಿಸರದಲ್ಲಿ ಸಮಾಪ್ತಿಗೊಂಡಿತು.


ವಿವಿಧ ಪ್ರದೇಶಗಳಿಂದ ಆಕರ್ಷಕ ರೀತಿಯಲ್ಲಿ ಅಲಂಕರಿಸಿರುವ ವಾಹನಗಳ ಜೊತೆ ಆಗಮಿಸಿ
ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ)ರ ಮದ್‌ಹ್, ಸ್ವಲಾತ್ ಸಂಕೀರ್ತನೆಗಳು ರ‍್ಯಾಲಿಯುದ್ದಕ್ಕೂ ಮೊಳಗಿತು. ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಮಂದಿ ರ‍್ಯಾಲಿ ವೀಕ್ಷಿಸಿದರು. ಸಂಪ್ಯ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.
ಸ್ವಯಂ ಸೇವಕರು ಸಹಕರಿಸಿದರು. ರ‍್ಯಾಲಿ ಆರಂಭದಲ್ಲಿ ಸಾರ್ವಜನಿಕರಿಗೆ ತಂಪು ಪಾನೀಯ ಮತ್ತು ಫಲಹಾರ ವಿತರಿಸಲಾಯಿತು. ರಶೀದ್ ಇಂಡೋ ಸ್ವಾಗತಿಸಿದರು.

ಮೀಲಾದ್ ಪ್ರಯುಕ್ತ ಈಶ್ವರಮಂಗಲ ಪೇಟೆಯನ್ನು ಅಲಂಕರಿಸಲಾಗಿತ್ತು. ಪೇಟೆ ಅಲಂಕಾರದಲ್ಲಿ ಅಬೂಬಕ್ಕರ್ ಇಲೆಕ್ಟ್ರಿಕಲ್, ಕರೀಮ್ ತೈವಳಪ್ಪು, ಯೂನುಸ್ ಮೇನಾಲ, ರವೂಫ್ ಮೇನಾಲ, ನವಾಝ್ ಫ್ಯಾಬ್‌ಝೋ, ಹನೀಫ್ ಜಿ, ನುಮಾನ್ ಕುಕ್ಕಾಜೆ, ನಜೀರ್ ಡೋಪ್ ಮೀಡಿಯಾ, ಹಾರಿಸ್ ಬಿ.ಸಿ, ಮುಸ್ತಫಾ ಬಿ.ಸಿ, ಅಬೂಸಾಲಿ ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here