ಚಾರ್ವಾಕ ಶ್ರೀನಿಧಿ ಸ್ತ್ರಿಶಕ್ತಿ ಗೊಂಚಲಿನ ಮಹಾಸಭೆ- ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಮಾಧವಿ ಕೋಡಂದೂರು, ಕಾರ್ಯದರ್ಶಿಯಾಗಿ ಶಕುಂತಳಾ ರೈ

ಕಾಣಿಯೂರು: ಚಾರ್ವಾಕ ಗ್ರಾಮ ಮಟ್ಟದ ಶ್ರೀನಿಧಿ ಸ್ತ್ರಿ ಶಕ್ತಿ ಗೊಂಚಲಿನ ಮಹಾಸಭೆಯು ಸರೋಜಿನಿ ಅವರ ಅಧ್ಯಕ್ಷತೆಯಲ್ಲಿ ತೀರ್ಥಕೇರಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾಣಿಯೂರು ವಲಯ ಮೇಲ್ವಿಚಾರಕಿ ಆರತಿಯವರು ಇಲಾಖೆಯ ಮಾಹಿತಿ ನೀಡಿದರು. ಕಾಣಿಯೂರು ಅರೋಗ್ಯ ಕೇಂದ್ರದ ಪುಷ್ಪಾಲತಾ, ನೇತ್ರಾವತಿ ಬ್ಲಾಕ್ ಸೊಸೈಟಿಯ ನಿರ್ದೇಶಕಿ ಸುಲೋಚನಾ, ಚಾರ್ವಾಕ ಅಂಗನವಾಡಿ ಕಾರ್ಯಕರ್ತೆ ಶಾರದಾ, ನಾಣಿಲ ಅಂಗನವಾಡಿ ಕಾರ್ಯಕರ್ತೆ ಹೊನ್ನಮ್ಮ, ಮುದುವ ಅಂಗನವಾಡಿ ಕಾರ್ಯಕರ್ತೆ ಲೀಲಾವತಿ,ಇಡ್ಯಡ್ಕ ಅಂಗನವಾಡ ಕಾರ್ಯಕರ್ತೆ ಅಕ್ಷತಾ, ಗಾಳಿಬೆಟ್ಟು ಅಂಗನವಾಡಿ ಕಾರ್ಯಕರ್ತೆ ಕಮಲ ಹಾಗೂ ಸ್ತ್ರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ತೀರ್ಥಕೇರಿ ಅಂಗನವಾಡಿ ಕೇಂದ್ರದ ಪುಟಾಣಿಗಳು ಪ್ರಾರ್ಥಿಸಿದರು. ನವ್ಯ ಸ್ತ್ರಿ ಶಕ್ತಿ ತಂಡದ ಚೈತ್ರಾ ಸ್ವಾಗತಿಸಿ, ಚಂದ್ರಕಲಾ ಉಳವ ವಂದಿಸಿದರು.ತೀರ್ಥಕೇರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಾಲಕಿ ಕಾರ್ಯಕ್ರಮ ನಿರೂಪಿಸಿದರು. ಕೀರ್ತಿ ಮತ್ತು ನವ್ಯ ಗುಂಪಿನ ಸದಸ್ಯರು ಸಹಕರಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ: ಈ ಸಂದರ್ಭದಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಕಾಣಿಯೂರು ಗ್ರಾ. ಪಂ. ಮಾಜಿ ಅಧ್ಯಕ್ಷೆ ಮಾಧವಿ ಕೋಡಂದೂರು, ಕಾರ್ಯದರ್ಶಿಯಾಗಿ ಶಕುಂತಳಾ ರೈ, ಬ್ಲಾಕ್ ಸೊಸೈಟಿ ಪ್ರತಿನಿಧಿಯಾಗಿ ಪದ್ಮಾವತಿ ಪುದ್ಯೋಟ್ಟು ಬೈಲು, ಉಪಾಧ್ಯಕ್ಷರಾಗಿ ಗುಣವತಿ ನಾಣಿಲ, ಜತೆ ಕಾರ್ಯದರ್ಶಿಯಾಗಿ ಮೋಹಿನಿ ಇಡ್ಯಡ್ಕ, ಕೋಶಾಧಿಕಾರಿಯಾಗಿ ಜಾನಕಿಯವರನ್ನು ಆಯ್ಕೆಮಾಡಲಾಯಿತು.

LEAVE A REPLY

Please enter your comment!
Please enter your name here