ನಾಪತ್ತೆಯಾಗಿದ್ದ ವಿದ್ಯಾರ್ಥಿ ಹೊಸೂರಿನಲ್ಲಿ ಪತ್ತೆ

0

ನೆಲ್ಯಾಡಿ: ನಾಪತ್ತೆಯಾಗಿದ್ದ ಇಲ್ಲಿನ ಕಾಲೇಜು ವಿದ್ಯಾರ್ಥಿ, ಅರಸಿನಮಕ್ಕಿ ನಿವಾಸಿ ತೀರ್ಥೇಶ್ ಎಂ.(18ವ.)ಬೆಂಗಳೂರಿನ ಹೊಸೂರಿನಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.


ತೀರ್ಥೇಶ್ ನಾಪತ್ತೆಯಾಗಿರುವ ಬಗ್ಗೆ ಆತನ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಹೊಸೂರಿನಲ್ಲಿ ಶಿವಮೊಗ್ಗ ಮೂಲದ ವ್ಯಕ್ತಿಯೊಬ್ಬರು ತೀರ್ಥೇಶ್ ನಾಪತ್ತೆ ಸುದ್ದಿ ವಾಟ್ಸಪ್ ಮೂಲಕ ಹರಿದಾಡುತ್ತಿರುವುದನ್ನು ಗಮನಿಸಿ ಶಿವಮೊಗ್ಗದಲ್ಲಿದ್ದ ಈತನನ್ನು ವಿಚಾರಿಸಿದಾಗ ಆತ ಮನೆಯ ಮೊಬೈಲ್ ಸಂಖ್ಯೆ ನೀಡಿದ್ದು. ತಕ್ಷಣ ಮನೆಗೆ ಕರೆ ಮಾಡಿ ಮಗನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.

ತೀರ್ಥೇಶ್‌ನ ತಂದೆ ವಿಜಯಚಂದ್ರರವರು ಉಪ್ಪಿನಂಗಡಿ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿ ಮಗನನ್ನು ಕರೆದುಕೊಂಡು ಬಂದಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here