
ಪುತ್ತೂರು: ಕೌಕ್ರಾಡಿ ಮನೆ ತೆರವು ಮಾಡಿದ ವಿಚಾರದಲ್ಲಿ ದಲಿತ ವೃದ್ದ ದಂಪತಿಗೆ ನ್ಯಾಯಕೊಡಿಸಲು ಆಗ್ರಹಿಸಿ, ಅಪರಾಧ ಮಾಡಿದ ಕಡಬ ತಹಶೀಲ್ದಾರ್ ವಿರುದ್ದ ಕಾನೂನು ಕ್ರಮಕೈಗೊಳ್ಳಬೇಕು, ದೌರ್ಜ್ಯನ್ಯ ನಡೆಸಿದ ಅಧಿಕಾರಿಗಳ ಅಮಾನತು ಮಾಡಬೇಕು, ವೃದ್ಧ ದಂಪತಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಮತ್ತು ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿ ದಲಿತ, ರೈತ, ಕಾರ್ಮಿಕ, ಯುವಜನ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟೀ ನೇತೃತ್ವದಲ್ಲಿ ಪುತ್ತೂರು ತಾಲೂಕು ಆಡಳಿತ ಸೌಧದ ಎದುರಿನ ಅಮರ್ಜವಾನ್ ಸ್ಮಾರಕ ಜ್ಯೋತಿ ಬಳಿ ಡಿ.13 ರಂದು ಪ್ರತಿಭಟನೆ ನಡೆಯಿತು.