ಬೊಳುವಾರಿನಲ್ಲಿ ಪಾಕ್ಷಿಕ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪಾಕ್ಷಿತ ಯಕ್ಷಗಾನ ತಾಳಮದ್ದಳೆಯು ಫೆ.1ರಂದು ಪಾರ್ತಿಸುಬ್ಬ ವಿರಚಿತ ” ಸುಗ್ರೀವ ಸಖ್ಯ” ಆಖ್ಯಾನ ನಡೆಯಿತು.


ಹಿಮ್ಮೇಳದಲ್ಲಿ ಯಲ್ ಯನ್ ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ ಕುಮಾರಿ ಶರಣ್ಯ ನೆತ್ರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ ( ಗುಡ್ಡಪ್ಪ ಬಲ್ಯ), ಸುಗ್ರೀವ ( ಮಾಂಬಾಡಿ ವೇಣುಗೋಪಾಲ ಭಟ್ ), ಹನೂಮಂತ ( ಹರಿಣಾಕ್ಷಿ ಜೆ ಶೆಟ್ಟಿ ಮತ್ತು ಭಾರತಿ ರೈ ಅರಿಯಡ್ಕ ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಟಿ ರಂಗನಾಥ ರಾವ್ ವಂದಿಸಿದರು. ಉಪಾಧ್ಯಕ್ಷ ಗುಡ್ಡಪ್ಪ ಬಲ್ಯ ಪ್ರಾಯೋಜಿಸಿದ್ದರು.

LEAVE A REPLY

Please enter your comment!
Please enter your name here