ಕುಟುಂಬದ ಶಕ್ತಿ ಮಹಿಳೆ ಸಾಧನಾ ಶೀಲರಾಗಬೇಕು – ಡಾ. ಹರಿಣಾಕ್ಷಿ ಎಂ.ಡಿ
ಪುತ್ತೂರು: ಆಧುನಿಕ ಕಾಲದಲ್ಲಿನ ಅವಕಾಶಗಳನ್ನು ಬಳಸಿಕೊಂಡು ಕುಟುಂಬದ ಶಕ್ತಿಯಾಗಿರುವ ಮಹಿಳೆ ಸಾಧನಾಶೀಲರಾಗಬೇಕು ಎಂದು ಉಡುಪಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ಪ್ರೊ. ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಹರಿಣಾಕ್ಷಿ ಎಂ.ಡಿ. ಅವರು ಹೇಳಿದರು.
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಯುವ ವಿಭಾಗಗಳ ಸಹಯೋಗದೊಂದಿಗೆ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಮಾ.9ರಂದು ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಜವಾಬ್ದಾರಿಯುತ ಮಹಿಳೆ ತನ್ನ ಮಕ್ಕಳಿಗೆ ಸಂಸ್ಕಾರದ ಬದುಕನ್ನು ಕಲಿಸಬೇಕೆಂದು ಹೇಳಿದರು.
ಸನ್ಮಾನ:
ಉಡುಪಿಯಲ್ಲಿ ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ಇಂಜಿನಿಯರ್ ಕು. ಶರಣ್ಯ ಮತ್ತು ಅಂತರರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಕು. ಶಿಲ್ಪಾ ಅವರನ್ನು ಸನ್ಮಾನಿಸಲಾಯಿತು. ನಗರ ಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ ಮತ್ತು ಅಂಗನವಾಡಿ ಶಿಕ್ಷಕಿ ವನಿತಾ ಕೊರಗಪ್ಪ ಅವರು ಸನ್ಮಾನಿತರನ್ನು ಪರಿಚಯಿಸಿದರು. ನಗರ ಸಭಾ ಸದಸ್ಯರಾಗಿರುವ ಮಹಿಳಾ ಗೌಡ ಸಂಘದ ಗೌರವ ಸಲಹೆಗಾರ ಗೌರಿ ಬನ್ನೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಮತ್ತು ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಶುಭ ಹಾರೈಸಿದರು. ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜಾ ಬೆಳಿಯಪ್ಪ ಕಾಣಿಚ್ಚಾರು ಅಧ್ಯಕ್ಷತೆ ವಹಿಸಿದ್ದರು. ಬನ್ನೂರು ವಲಯದ ಮಹಿಳಾ ಘಟಕಾಧ್ಯಕ್ಷೆ ಉಷಾ ಪದ್ಮನಾಭ ಸ್ವಾಗತಿಸಿ ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ ಸಂಧ್ಯಾ ಶಶಿಧರ್ ವಂದಿಸಿದರು. ವಿವೇಕಾನಂದ ಶಾಲೆಯ ಶಿಕ್ಷಕಿ ಲತಾ ಅಮರನಾಥ್ ಮತ್ತು ಕು. ಅನ್ವಿತಾ ಅಮರನಾಥ್ ಕಾರ್ಯಕ್ರಮ ನಿರೂಪಿಸಿದರು. ಅಮೃತಾ ಅಮರನಾಥ್ ವಿವಿಧ ಕಾರ್ಯಕ್ರಮಗಳಲ್ಲಿ ಸಹಕರಿಸಿದರು. ಬನ್ನೂರು ವಲಯ ಗೌಡ ಸಂಘ ಕಾರ್ಯಕ್ರಮವನ್ನು ಆಯೋಜಿಸಿತ್ತು.