ವಿಟ್ಲ: ಶ್ರೀ ರಾಮದಾಸಾಶ್ರಮ ತಿರುವನಂತಪುರ ಇವರ ನೇತೃತ್ವದಲ್ಲಿ ಕೊಲ್ಲೂರಿನಿಂದ ಕನ್ಯಾಕುಮಾರಿಗೆ ಹೊರಟ “ಶ್ರೀ ರಾಮರಥ”ವು ಮಾ.16ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಕ್ಕೆ ತಲುಪಿತು. ಈ ಸಂದರ್ಭದಲ್ಲಿ ರಥವನ್ನು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಸ್ಥಾನದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಗಳು ಶ್ರೀ ರಾಮನ ಆದರ್ಶ ತತ್ವ ಗಳನ್ನು ಪಾಲಿಸುವಂತೆ ಸಂದೇಶ ನೀಡಿ ರಥಯಾತ್ರೆಗೆ ಶುಭ ಕೋರಿದರು.