
ಪುತ್ತೂರು : ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನೋವೇಷನ್ ಫೌಂಡೇಶನ್, ಭಾರತ ಸರಕಾರ ಇದರ ವತಿಯಿಂದ ನಡೆಯುವ ಇನ್ಸ್ಪೈರ್ ಅವಾರ್ಡ್ ಅವಾರ್ಡ್ ಮಾನಕ್ಗೆ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಹತ್ತನೇ ತರಗತಿಯ ಅಕ್ಷಯ್ ಗಣೇಶ್ (ರಘುರಾಮ ಎಸ್ ಮತ್ತು ವೈಶಾಲಿ ಎಂ ಆರ್ ದಂಪತಿ ಪುತ್ರ) “Herbal printing ink” ಎಂಬ ಮಾದರಿಯು ಆಯ್ಕೆಯಾಗಿರುತ್ತದೆ.
ಮಾದರಿ ತಯಾರಿಸಲು ಕೇಂದ್ರ ಸರಕಾರದಿಂದ ಹತ್ತು ಸಾವಿರ ರೂ, ಧನಸಹಾಯವನ್ನು ಈ ವಿದ್ಯಾರ್ಥಿಯು ಪಡೆದಿರುತ್ತಾರೆ ಎಂದು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ತಿಳಿಸಿದ್ದಾರೆ.