ನಿಡ್ಪಳ್ಳಿ ಗ್ರಾ. ಪಂಚಾಯತಿಗೆ ಕ್ಷಯ ಮುಕ್ತ ಗ್ರಾಮ ಪಂಚಾಯತ್- 2024 ಪ್ರಮಾಣ ಪತ್ರ- ಕಂಚಿನ ಪ್ರತಿಮೆ ಪ್ರದಾನ

0

ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಮ ಪಂಚಾಯತಿಗೆ ಕ್ಷಯ ಮುಕ್ತ ಗ್ರಾಮ ಪಂಚಾಯತ್ -2024 ಪ್ರಮಾಣ ಪತ್ರ ಮತ್ತು ಗಾಂಧೀಜಿ ಕಂಚಿನ ಪ್ರತಿಮೆ ನೀಡಿ ಮಾ.24 ರಂದು ಗೌರವಿಸಲಾಯಿತು.

ದ.ಕ.ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಗಳ ಕಛೇರಿ, ನರ್ಸಿಂಗ್ ಫೌಂಡೇಶನ್ ಯೆನಪೊಯ ನರ್ಸಿಂಗ್ ಕಾಲೇಜು ದೇರಳ ಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಯೆನಪೊಯ ಆಸ್ಪತ್ರೆಯಲ್ಲಿ ಮಾ.24 ರಂದು ನಡೆದ ವಿಶ್ವ ಕ್ಷಯ ರೋಗ ದಿನ- 2025 ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು.

ಕೇಂದ್ರ ಸರಕಾರ ದೇಶವನ್ನು ಕ್ಷಯ ಮುಕ್ತ ಭಾರತ ಮಾಡ ಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದು ಆ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮತ್ತು ಪಿಡಿಒ ಸಂಧ್ಯಾಲಕ್ಷ್ಮೀ ಗೌರವವನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here