ಪುತ್ತೂರು: ಪುತ್ತೂರು ಕೋಟೆ ಚೆನ್ನಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಕಾಮತ್ ರೆಸ್ಟೋಂಟ್ ನ ಮಾಲಕ ದಿನೇಶ್ ಕಾಮತ್ ಅವರ ಪತ್ನಿ ವಿನುತಾ ದಿನೇಶ್ ಕಾಮತ್ (47ವ) ರವರು ಅಲ್ಪಕಾಲದ ಅಸೌಖ್ಯದಿಂದ ಎ.11 ರ ನಸುಕಿನ ಜಾವ ನಿಧನರಾದರು.
ಪುತ್ತೂರು ಕಲ್ಲಾರೆ ನಿವಾಸಿಯಾಗಿರುವ ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತ ದೇಹವನ್ನು ಕಲ್ಲಾರೆ ಮನೆಗೆ ತರಲಾಗಿದೆ. ಮೃತರು ಗಂಡ ದಿನೇಶ್ ಕಾಮತ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.