ರಾಮಾಯಣವನ್ನು ನಾನಾ ರೀತಿಯಲ್ಲಿ ಬಿಂಬಿಸುವ ಅನೇಕ ಲೇಖಕರಿದ್ದಾರೆ.ಇದೇ ಸತ್ಯ ಎಂದು ಬಿಂಬಿಸಲು ಹೊರಟವರು ಅನೇಕರಿದ್ದಾರೆ.ಕನ್ನಡದ ಸುಪ್ರಸಿದ್ದ ಕಾದಂಬರಿಕಾರ ಎಸ್.ಎಲ್.ಭೈರಪ್ಪರು ಇವರೆಲ್ಲರಿಗಿಂತ ಭಿನ್ನ. ಅದಕ್ಕೆ ಅವರ ಬರಹಗಳೇ ಸಾಕ್ಷಿ. ಈ ಹಿಂದೆ ಭೈರಪ್ಪನವರು ಹೆಚ್ಚಾಗಿ ಮಹಾಭಾರತದ ಪಾತ್ರಗಳನ್ನೆ ತಳುಕು ಹಾಕುವುದು ಹೆಚ್ಚು.ಅದಕ್ಕೆ ಸಾಟಿ ಎಂಬಂತೆ ಆಧುನಿಕತೆಯ ಗಾಳಿಯೊಂದಿಗೆ ರಾಮ, ಸೀತೆಯ ವಿಭಿನ್ನ ಪಾತ್ರವನ್ನು ಓದುಗರಿಗೆ ಕಟ್ಟಿಕೊಟ್ಟ ಕೀರ್ತಿ ಎಸ್.ಎಲ್.ಭೈರಪ್ಪರವರಿಗೆ.ಅದು ʼ ಉತ್ತರಕಾಂಡʼ ಎಂಬ ಅದ್ಭುತ ಕಾದಂಬರಿಯ ಮೂಲಕ.
ಉತ್ತರಕಾಂಡ ಕಾದಂಬರಿ 2017 ಜ.16 ರಲ್ಲಿ ಸಾಹಿತ್ಯ ಭಂಡಾರ, ಬೆಂಗಳೂರು ಪ್ರಕಾಶನದಲ್ಲಿ ಪ್ರಕಟವಾದ ಕಾದಂಬರಿ. ಬಿಡುಗಡೆಯಾದ ಮೊದಲ ದಿನವೇ ‘ಉತ್ತರಕಾಂಡ’ ಪುಸ್ತಕದ ಮೊದಲ ಆವೃತ್ತಿ ಖಾಲಿಯಾಯ್ತು ಅಂದರೆ ನೀವೇ ಲೆಕ್ಕ ಹಾಕಿ ಆ ಕಾದಂಬರಿಗೆ ಕಾಯುತ್ತಿದ್ದ ಓದುಗರ ಪಡೆ ಮತ್ತು ಲೇಖಕರಿಗಿದ್ದ ಓದುಗ ಸೃಷ್ಠಿಯ ಮಾಯೆ ಎಂತಹುದ್ದಿರಬಹುದೆಂದು.
ಭೈರಪ್ಪರವರು ನಲವತ್ತು ವರ್ಷಗಳ ಹಿಂದೆ ‘ಪರ್ವ’ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ್ದೇ ಜಾಸ್ತಿ. ಆದರೆ ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಸೀತೆ ರಾಮರ ಅಂತರಾಳಕ್ಕೆ ʼಉತ್ತರಕಾಂಡʼವೇ ಉತ್ತರವೆ….?ಅನ್ನುವ ಪ್ರಶ್ನೆಗೆ ಇದರಲ್ಲಿ ಉತ್ತರವೂ ಸಿಗಬಹುದು. ಉತ್ತರ ಸಿಕ್ಕಿ ಮತ್ತೆ ಪ್ರಶ್ನೆಗಳೂ ಏಳಬಹುದು.
ಆಧುನಿಕತೆಗೆ ಪುರಾಣದ ಬಿಂಬ
ಹೌದು ಈ ಕಾದಂಬರಿಯಲ್ಲಿ ಪುರಾಣದ ಸಂಗತಿಯನ್ನೆ ಹೆಣೆದರೂ ಆಧುನಿಕತೆಯ ಬಂಧನವಿದೆ ಎಂದು ಓದುತ್ತಾ ಹೋದಂತೆಲ್ಲಾ ನಮಗೆ ಅರಿವಾಗತೊಡಗುತ್ತದೆ.ರಾಮ ಸೀತೆಯ ಸುತ್ತಲೂ ಸುತ್ತು ಹಾಕುವ ಕಾದಂಬರಿ ಇದಾಗಿದ್ದು, ಓದುವಾತನಿಗೆ ತನ್ನ ಮನಸ್ಸಲ್ಲೇ ಪ್ರಶ್ನೆಯನ್ನು ಹುಟ್ಟು ಹಾಕಿಸುವುದಂತು ಖಂಡಿತ. ಸೀತೆಯ ವೇದನೆ, ರಾಮನ ಆಡಳಿತ, ಸೀತೆಯ ವಿರಹ, ರಾಮ ಸರಯೂ ನದಿಯಲ್ಲಿ ಸಮಾಧಿಯಾಗುವವರೆಗಿನ ಚಿತ್ರಣವಂತೂ ಮನಸ್ಸಿನ ಆಳದಲ್ಲೋಂದು ನೋವಿನ ಮೌನ ಆವರಿಸುದಂತೂ ಖಂಡಿತಾ.
ರಾಮ ಸೀತೆಯ ಮನದಾಳವನ್ನು ನೀವು ತಿಳಿಯಬೇಕೆ ಹಾಗಾದರೆ ತಡ ಯಾಕೆ..? ಕೈಯಲ್ಲಿ ಹಿಡಿದು ಮನಸಾರೆ ಓದಲು ಇಂದೇ ಪುಸ್ತಕ ತೆಗೆದುಕೊಳ್ಳಿ. ಪುಸ್ತಕಕ್ಕಾಗಿ ಈ ಕೆಳಗಿರುವ ಲಿಂಕ್ ಮೂಲಕ ಸಹಾಯ ಪಡೆದುಕೊಳ್ಳಿ
https://shorturl.at/udfwh
https://shorturl.at/DOYDS (contact : +91 96064 74289 )
ಬರಹ: ಅಕ್ಷಯ್ ಕುಮಾರ್ ಎ