ಬಡಗನ್ನೂರು ಗ್ರಾ. ಪಂ ಸಾಮಾನ್ಯ ಸಭೆ

0

ಬಡಗನ್ನೂರು: ಬಡಗನ್ನೂರು ಗ್ರಾಮಕ್ಕೆ ಪವರ್‌ ಮ್ಯಾನ್ ನೇಮಕ ಮಾಡುವ ಬಗ್ಗೆ ಮೆಸ್ಕಾಂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ಬಡಗನ್ನೂರು ಗ್ರಾ. ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೖೆಗೊಳ್ಳಲಾಯಿತು.

ಸಭೆಯು  ಗ್ರಾ. ಪಂ. ಅಧ್ಯಕ್ಷೆ ಪುಷಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ಮೇ. 27 ರಂದು ಗ್ರಾ. ಪಂ ಸಭಾಂಗಣದಲ್ಲಿ ನಡೆಯಿತು.

ಬಡಗನ್ನೂರು ಗ್ರಾಮದ ಹಲವು ಭಾಗದಲ್ಲಿ ಪದೇ ಪದೇ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು ಒಬ್ಬರೇ ಪವರ್‌ ಮ್ಯಾನ್  ಎಲ್ಲಾ ಭಾಗದಲ್ಲಿ ಓಡಾಟ ನಡೆಸಿ ಸಮಸ್ಯೆ ಬಗಹರಿಸಲು ಕಷ್ಟಕರವಾಗಿದೆ. ಇದರಿಂದ ಇನ್ನೊಬ್ಬ ಪವರ್‌ ಮ್ಯಾನ್ ರವರನ್ನು ನೇಮಕಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಪತ್ರ ಬರೆಯಲು ಸದಸ್ಯ ಲಿಂಗಪ್ಪ ಗೌಡ ಮೋಡಿಕೆ  ರವರು ಒತ್ತಾಯಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮೆಸ್ಕಾಂ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯಿಸಲಾಯಿತು.

ಅಂಬಟೆಮೂಲೆ ಕುಡಿಯುವ ನೀರಿನ ಪಂಪ್ ರಿಪೇರಿ  ಮಾಡದೆ ಗುತ್ತಿಗೆಗಾರರು ಬಿಲ್ ನೀಡಿದ್ದು, ಈ ಬಗ್ಗೆ ವಾರ್ಡ್ ಸದಸ್ಯೆ ಜ್ಯೋತಿ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿ, ನಮ್ಮ ವಾರ್ಡ್ ನ ಕುಡಿಯುವ ನೀರಿನ ಪಂಪ್ ದುರಸ್ಥಿ ನಾವೇ ಹೇಳಿ ಮಾಡಿಸುವುದು. ನಾವು ಜನವರಿ ತಿಂಗಳಲ್ಲಿ ಪಂಪ್ ರಿಪೇರಿ ಮಾಡಿಸಿಲ್ಲ ಮತ್ತು  ಗುತ್ತಿಗೆಗಾರು ಮಾಡಿದ್ದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಸಭೆಯ ಗಮನಕ್ಕೆ ತಂದರು.ಈ ಬಗ್ಗೆ ಸದಸ್ಯರೊಳಗೆ ಚರ್ಚೆ ನಡೆಯಿತು. ಈ ಬಗ್ಗೆ ಪಿಡಿಓ ಬಿ. ಸಿ ಸುಬ್ಬಯ್ಯ ಮಧ್ಯ ಪ್ರವೇಶಿಸಿ ಮುಂದೆ ಕುಡಿಯುವ ನೀರಿನ ಪಂಪ್ ರಿಪೇರಿ ಹಾಗೂ ಇತರ ಕಾಮಗಾರಿಗಳ ಬಿಲ್ ಪಾವತಿ ಮಾಡಲು ಆಯಾ ವಾರ್ಡ್ ಸದಸ್ಯರು ದೖಡಿಕರಣ ನೀಡಬೇಕು. ಆ ಬಳಿಕವೇ  ಗುತ್ತಿಗೆಗಾರರಿಗೆ ಬಿಲ್ ಪಾವತಿ ಮಾಡುವುದು ಎಂದರು. ಬಳಿಕ ಈ ಬಗ್ಗೆ ನಿರ್ಣಯ ಕೖೆಗೊಳ್ಳಲಾಯಿತು.

ಸಭೆಯಲ್ಲಿ ಸದಸ್ಯರುಗಳಾದ ರವಿರಾಜ ರೖೆ ಸಜಂಕಾಡಿ, ಸಂತೋಷ ಅಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ರವಿಚಂದ್ರ ಸಾರೆಪ್ಪಾಡಿ, ಲಿಂಗಪ್ಪ ಗೌಡ ಮೋಡಿಕೆ, ಧರ್ಮೇಂದ್ರ ಕುಲಾಲ್ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ, ಶ್ರೀಮತಿ ಕನ್ನಡ್ಕ, ಸವಿತಾ ನೆರೋತ್ತಡ್ಕ,. ಹೇಮಾವತಿ ಮೋಡಿಕೆ, ದಮಯಂತಿ ಕೆಮನಡ್ಕ, ಸುಜಾತ ಮೃಂದನಡ್ಕ ಜ್ಯೋತಿ ಮತ್ತು ಅಂಬಟೆಮೂಲೆ ಉಪಸ್ಥಿತರಿದ್ದರು.

ಗ್ರಾ. ಪಂ ಕಾರ್ಯದರ್ಶಿ ಕೊರಗಪ್ಪ  ನಾಯ್ಕ ಸ್ವಾಗತಿಸಿ ವಂದಿಸಿದರು. ಪಿಡಿಓ ಬಿ. ಸಿ ಸುಬ್ಬಯ್ಯ ಸಾರ್ವಜನಿಕ ಅರ್ಜಿ ಹಾಗೂ ಸರಕಾರಿ ಸುತ್ತೋಲೆಗಳನ್ನು ಸಭೆಗೆ ಮಂಡಿಸಿದರು.ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here