ಶತಮಾನದ ಹೊಸ್ತಿಲಲ್ಲಿರುವ ಬೆಟ್ಟಂಪಾಡಿ ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳ ಉದ್ಘಾಟನೆ

0

ಶತ ಸಂಭ್ರಮದ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ ಉತ್ತಮ ಬೆಳವಣಿಗೆ-ಶಶಿಕುಮಾರ್ ರೈ ಬಾಲ್ಯೊಟ್ಟು

ಪುತ್ತೂರು: ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ, ಶತಮಾನದ ಹೊಸ್ತಿಲಲ್ಲಿರುವ ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಊರಿನ ದಾನಿಗಳ, ವಿದ್ಯಾಭಿಮಾನಿಗಳ ಹಾಗೂ ಶಿಕ್ಷಕರ ಸಹಕಾರದಿಂದ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮ ಮೇ.27ರಂದು ನಡೆಯಿತು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಶಶಿಕುಮಾರ್ ರೈ ಬಾಲ್ಯೊಟ್ಟುರವರು ದೀಪ ಪ್ರಜ್ವಲನಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಶಾಲೆಯಲ್ಲಿ ನಾನು ಕೂಡ ಮೂರು ವರ್ಷ ಕಲಿತಿದ್ದೇನೆ. ಬಹಳ ಶಿಸ್ತುಬದ್ಧ ಕಲಿಕೆಯನ್ನು ನೀಡಿದ ಶಾಲೆಯಾಗಿದೆ. ಇಲ್ಲಿ ಎಲ್‌ಕೆಜಿ ಯುಕೆಜಿ ಆರಂಭ ಮಾಡಿದ್ದು, ಸಂತೋಷದಾಯಕ. ವಿದ್ಯಾಭಿಮಾನಿಗಳ ಒಂದು ಟ್ರಸ್ಟ್ ರಚನೆ ಮಾಡಿ ಅದರ ಮೂಲಕ ಶಾಲೆಯನ್ನು ನಡೆಸಿ, ನಾವು ಸಹಕಾರ ನೀಡುತ್ತೇವೆ. ಶತಮಾನದ ಸಂಭ್ರಮದಲ್ಲಿರುವ ಈ ಶಾಲೆ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಬೆಟ್ಟಂಪಾಡಿ ಕ್ಲಸ್ಟರ್‌ನ ಸಿ.ಆರ್.ಪಿ. ಪರಮೇಶ್ವರಿ ಪ್ರಸಾದ್ ಮಾತನಾಡಿ ಈ ಶಾಲೆಯನ್ನು ಮುಚ್ಚಬಾರದು ಎಂಬ ಉದ್ಧೇಶದಿಂದ ಎಲ್‌ಕೆಜಿ ಯುಕೆಜಿ ತರಗತಿ ಆರಂಭ ಮಾಡುವ ಚಿಂತನೆ ಮಾಡಲಾಯಿತು. ಎಲ್ಲರ ಪ್ರೋತ್ಸಾಹ, ಸಹಕಾರದಿಂದ ಮಕ್ಕಳ ದಾಖಲಾತಿ ಹೆಚ್ಚಾಗಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲಾಯಿತು. ಯಾವುದೋ ಒಂದು ಶಕ್ತಿಯಿಂದ ಶಾಲೆ ಉಳಿಯಿತು ಎಂದು ಹೇಳಿ ಶುಭಹಾರೈಸಿದರು.

ಕೃಷ್ಣಪ್ರಸಾದ್ ಆಳ್ವ, ಆಲಿಕುಂಞಿ ಕೊರಿಂಗಿಲ, ಕಾಸರಗೋಡು ಬೇಂಗಪದವು ಶಾಲಾ ಮುಖ್ಯಗುರು, ಶಿಕ್ಷಣ ಪ್ರೇಮಿ ಶಿವಕುಮಾರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಚೆಲ್ಯಡ್ಕ, ಶಾಲಾ ಹಿರಿಯ ವಿದ್ಯಾರ್ಥಿ, ಇಂಜಿನಿಯರ್ ಆಲಿಕುಂಞಿ ಕೊರಿಂಗಿಲ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಮಾತನಾಡಿ ಶಿಕ್ಷಕರ, ಊರಿನವರ, ಹಿರಿಯ ವಿದ್ಯಾರ್ಥಿಗಳ ಶ್ರಮದಿಂದ ಈ ಸಾಧನೆ ಆಗಿದೆ. ಮುಂದಿನ ದಿನಗಳಲ್ಲಿ ಈ ಶಾಲೆಯಿಂದ ಉತ್ತಮ ನಾಗರಿಕರು ಮೂಡಿಬರಲಿ ಎಂದು ಹೇಳಿ ಶುಭಹಾರೈಸಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಮಮತಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯತೀಶ್ ಕೋರ್ಮಂಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇರ್ದೆ-ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ನವೀನ್ ರೈ ಚೆಲ್ಯಡ್ಕ, ಪ್ರಕಾಶ್ ರೈ ಬೈಲಾಡಿ, ಮೊಯಿದು ಕುಂಞಿ, ಲಲಿತಾ, ರಮ್ಯ, ಊರಿನ ಹಿರಿಯರಾದ ಚಂದ್ರಾವತಿ ರೈ ಗುತ್ತು, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಾಲಯದ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಹಿರಿಯರಾದ ಮಹಮ್ಮದ್ ಶಾಲಾ ಬಳಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಡಾ.ಸತೀಶ್ ರಾವ್ ಬೆಟ್ಟಂಪಾಡಿ, ಇರ್ದೆಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಗನ್ನಾಥ ರೈ ಕೊಮ್ಮಂಡ, ಕೆಎಸ್.ಆರ್.ಟಿ.ಸಿ ನಿವೃತ್ತ ಚಾಲಕ ಸೇಷಪ್ಪ ಪೂಜಾರಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ, ಪೇರಲ್ತಡ್ಕ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ, ಪ್ರಭಾಕರ ರೈ ಬಾಜುವಳ್ಳಿ, ಕುಂಬ್ರ ಕೆ.ಪಿ.ಎಸ್. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ಟಿ., ಹಮೀದ್ ಕೊಮ್ಮೆಮಾರು, ಶೇಷನ್ ಪಾರ, ನಿವೃತ್ತ ಉಪನ್ಯಾಸಕ ಕೊರಗಪ್ಪ ರೈ ಕೇಕನಾಜೆ, ಮಹಮ್ಮದ್ ಕುಂಞಿ ಕೂಟತ್ತಾನ, ವೇಣುಗೋಪಾಲ್ ಕೋನಡ್ಕ, ಶೇಷಪ್ಪ ರೈ ಮೂರ್ಕಾಜೆ, ಸತೀಶ್ ರೈ ಮೂರ್ಕಾಜೆ, ಉಚಿತ್ ಕುಮಾರ್ ಬದಿನಾರು, ನವೀನ್ ಮಿತ್ತಡ್ಕ, ಲಿಂಗಪ್ಪ, ಗೌರಿಶಂಕರ್, ಹರಿಪ್ರಸಾದ್, ರಕ್ಷಿತ್, ಮಹಮ್ಮದ್ ನೌಫಲ್, ಹಿರಿಯ ಶಿಕ್ಷಕಿ ಪುಷ್ಪ, ಗೌರವ ಶಿಕ್ಷಕಿಯರರಾದ ಭಾರತಿ, ಮಮತಾ ಹಾಗೂ ಎಸ್‌ಡಿಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ವಿಶೇಷಚೇತನ ಮಗುವಿನ ಪೋಷಕರಿಗೆ ಬಾಂಡ್ ಹಸ್ತಾಂತರ
ಬೆಟ್ಟಂಪಾಡಿ ಶಾಲೆಯ ಹಿರಿಯ ವಿದ್ಯಾರ್ಥಿ ಯಶೋಧರ ಕಜೆ ಮತ್ತು ಚೇತನಾ ಕಜೆಯವರ ಆರು ವರ್ಷದ ವಿಶೇಷ ಚೇತನ ಮಗು ಬೇಬಿ ಶಾರ್ವಿರವರ ಹೆಸರಿನಲ್ಲಿ ಶಾಲಾ ಮುಖ್ಯ ಶಿಕ್ಷಕಿ ಮಮತಾರವರು ಬೆಟ್ಟಂಪಾಡಿ ಬರೋಡಾ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ ರೂ.1೦೦೦ ಮೌಲ್ಯದ ಬಾಂಡ್‌ನ್ನು ದಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಗುವಿನ ಹೆತ್ತವರಿಗೆ ಹಸ್ತಾಂತರಿಸಿದರು. ನೂತನವಾಗಿ ಶಾಲೆಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಶಾಲಾಬ್ಯಾಗ್, ಪುಸ್ತಕ, ವಿತರಿಸಲಾಯಿತು.

LEAVE A REPLY

Please enter your comment!
Please enter your name here