ಪುತ್ತೂರು: ಮಾಣಿ-ಮೈಸೂರುರಾಷ್ಟ್ರೀಯ ಹೆದ್ದಾರಿಯ ಪುತ್ತೂರಿನ ನೆಹರು ನಗರದಿಂದ 500 ಮೀಟರ್ ಒಳಭಾಗದಲ್ಲಿರುವ ವಿದ್ಯಾ ಸಂಸ್ಥೆ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯಸ್ವಾಯತ್ತಮಹಾವಿದ್ಯಾಲಯ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಭಾರತೀಯ ಸಂಸ್ಕೃತಿ, ಆಧ್ಯಾತ್ಮ, ಸಂಸ್ಕಾರದ ಅರಿವು ಮೂಡಿಸುವುದರ ಜೊತೆಗೆ ಗುಣಮಟ್ಟದ ಪರಿಣಾಮಕಾರಿ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪುತ್ತೂರಿನಲ್ಲಿ 1965ರಲ್ಲಿ ಸ್ಥಾಪನೆಯಾಯಿತು. ಪುತ್ತೂರಿನ ಜನತೆಗೆ ತಮ್ಮ ನೆಲದ ಸಂಸ್ಕೃತಿಯನ್ನು ತಿಳಿಯಪಡಿಸುವ, ದೇಶಪ್ರೇಮವನ್ನು ಮೈಗೂಡಿಸುವ ಶಿಕ್ಷಣ ಸಂಸ್ಥೆ ಬೇಕು ಎನ್ನುವ ಚಾರಿತ್ರಿಕ ಹಿನ್ನೆಲೆಯಿಂದ ಹೋರಾಟದ ಫಲವಾಗಿ ಹುಟ್ಟಿಕೊಂಡ ಸಂಸ್ಥೆ ಇದು. ಅಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಅಂಕಗಳನ್ನು ಪರಿಗಣಿಸದೆ, ಉತ್ತೀರ್ಣದ ಕನಿಷ್ಠ ಅಂಕ ಪಡೆದ ವಿದ್ಯಾರ್ಥಿಗೂ ಅವನು ಬಯಸಿದ ವಿಷಯದ ಅಧ್ಯಯನಕ್ಕೆ ಅವಕಾಶಕೊಟ್ಟು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಳ್ಳುವಂತೆ ಶಿಕ್ಷಣಕ್ಕೆ ಒಳಪಡಿಸಿ ತಿದ್ದಿತೀಡಿ ಸಂಸ್ಕಾರದಿಂದ ಬದುಕುವಂತೆ ಮಾಡುವ ದೊಡ್ಡ ಜವಾಬ್ದಾರಿಯನ್ನು ಈ ಸಂಸ್ಥೆ ಇಟ್ಟುಕೊಂಡಿದೆ. ಎಲ್ಲರೂ ಅಸಡ್ಡೆ ವಹಿಸಿದರೆ,ಯುವ ಸಮುದಾಯ ದಾರಿತಪ್ಪುವ ಅಪಾಯವನ್ನು ಗ್ರಹಿಸಿದ ನಮ್ಮ ಹಿರಿಯರು ಯುವ ಸಮುದಾಯಕ್ಕೆದಾರಿತೋರಿಸುವ ದೀಪದಂತೆ ವಿವೇಕಾನಂದ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ರ್ಯಾಂಕ್ಗಳು:
ಕಳೆದ ಶೈಕ್ಷಣಿಕ (2023-24) ವರ್ಷದಲ್ಲಿ ಕಾಲೇಜು ವಾಣಿಜ್ಯ ವಿಭಾಗದಲ್ಲಿ 3 ಮತ್ತು 9ನೇ ರ್ಯಾಂಕ್, ವಿಜ್ಞಾನ ವಿಭಾಗದಲ್ಲಿ 5 ಮತ್ತು 8ನೇ ರ್ಯಾಂಕ್, ಕಲಾ ವಿಭಾಗದಲ್ಲಿ 10ನೇ ರ್ಯಾಂಕ್ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕನ್ನಡ ಭಾಷೆಯ ನಾಲ್ಕು ಸೆಮಿಸ್ಟರ್ಗಳಲ್ಲಿ ಅತ್ಯಧಿಕ ಅಂಕ ಪಡೆದವರಿಗೆ ನೀಡಲಾಗುವ ಎಸ್. ವಿ.ಪರಮೇಶ್ವರ ಭಟ್ಟ ಸ್ಮಾರಕ ನಗದು ಬಹುಮಾನಕ್ಕೆ ಭಾಜನವಾಗಿದೆ.
ನ್ಯಾಕ್ ಮೌಲ್ಯಾಂಕನ:
ಯುಜಿಸಿಯ ನ್ಯಾಕ್ ಮೌಲ್ಯಾಂಕನದಲ್ಲಿ ನಿರಂತರವಾಗಿ ಉನ್ನತ ಸ್ಥಾನವನ್ನು ಕಾಪಾಡಿಕೊಂಡುಬಂದಿದೆ. ರಾಷ್ಟ್ರೀಯ ಮೌಲ್ಯಾಂಕನ ಸಮಿತಿಯಿಂದ 2004ರಲ್ಲಿ B++, 2011ರಲ್ಲಿ A (3.30ಅಂಕ) 2017ರಲ್ಲಿ (3.30 ಅಂಕ)ಇದರೊಂದಿಗೆ ಯುಜಿಸಿಯಿಂದ ಪೊಟೆನ್ಶಿಯಲ್ ಫಾರ್ಎಕ್ಸಲೆನ್ಸ್(Potencial for excelence)ಮಾನ್ಯತೆಯನ್ನು ಪಡೆಯಿತು.
ಸ್ವಾಯತ್ತ ಸಂಸ್ಥೆ:
2017ರಲ್ಲಿ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ಮೌಲ್ಯಾಂಕನತಜ್ಞ ಸಮಿತಿಯ ಸದಸ್ಯತಂಡ ವಿವೇಕಾನಂದ ಮಹಾವಿದ್ಯಾಲಯ ಸ್ವಾಯತ್ತ ಸಂಸ್ಥೆಯಾಗುವ ಅರ್ಹತೆಯನ್ನು ಒಳಗೊಂಡಿದೆ ಎನ್ನುವ ಶಿಫಾರಸ್ಸನ್ನು ಯುಜಿಸಿಗೆ ಮಾಡಿತು. ಈ ಶಿಫಾರಸ್ಸು ಮುಂದಿನ ದಿನಗಳಲ್ಲಿ ಸ್ವಾಯತ್ತತೆಯಕಡೆಗೆ ದಿಟ್ಟ ಹೆಜ್ಜೆಯಿಡಲು ಸಹಕಾರಿಯಾಯಿತು.ಇದಕ್ಕನುಗುಣವಾಗಿ 2022ರಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಸ್ವಾಯತ್ತತೆಯನ್ನು ನೀಡುವ ಕುರಿತ ಯುಜಿಸಿಯ ತಜ್ಞ ಸಮಿತಿಯವರು ಕಾಲೇಜಿಗೆ ಭೇಟಿ ನೀಡಿಇಲ್ಲಿಯ ಅಧ್ಯಾಪಕರ ಶೈಕ್ಷಣಿಕಅರ್ಹತೆ, ಸಮರ್ಪಣೆಯ ಮನೋಭಾವ ಮತ್ತು ಪಾಠ ಪ್ರವಚನಗಳ ದೃಷ್ಟಿಕೋನಗಳು, ಮೂಲಭೂತ ಸೌಲಭ್ಯಗಳು, ಸಂಶೋಧನೆಗೆಒದಗುವ ಸೌಲಭ್ಯಗಳು, ಶೈಕ್ಷಣಿಕವಾದ ಒಳ್ಳೆಯ ಅಭ್ಯಾಸಗಳು, ಕ್ರೀಡೆ, ಲಲಿತಕಲೆ, ಭಾಷೆ-ಸಾಹಿತ್ಯ, ಎನ್ಎಸ್ಎಸ್, ಎನ್ಸಿಸಿ, ರೋವರ್ಸ್-ರೇಂಜರ್ಸ್, ರೆಡ್ಕ್ರಾಸ್ ಮುಂತಾದ ವಿಚಾರಗಳಿಗೆ ಸಿಗುವ ಪ್ರೋತ್ಸಾಹಗಳನ್ನು ಗಮನಿಸಿ ಸ್ವಾಯತ್ತತೆಯನ್ನು ಪರಿಗಣಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿತು. ಯುಜಿಸಿಯ ತಜ್ಞ ಸಮಿತಿಯ ಶಿಫಾರಸ್ಸನ್ನು ಮಂಗಳೂರು ವಿಶ್ವವಿದ್ಯಾನಿಲಯ ಸರಕಾರಕ್ಕೆ ಕಳುಹಿಸಿಕೊಟ್ಟು ಘನ ಕರ್ನಾಟಕ ಸರಕಾರಕಾಲೇಜಿಗೆ ನೀಡಿದ ಸ್ವಾಯತ್ತೆಯ ಮಾನ್ಯತೆಯನ್ನು ಅಂಗೀಕರಿಸುವ ಮೂಲಕ ವಿವೇಕಾನಂದ ಮಹಾವಿದ್ಯಾಲಯ ಸ್ವಾಯತ್ತ ಸಂಸ್ಥೆಯಾಗಿರೂಪುಗೊಂಡಿದೆ.ಈ ಮೂಲಕ ತನ್ನದೇ ಆದ ಅಧ್ಯಯನ ಮಂಡಳಿ, ಪರೀಕ್ಷಾಂಗ ವ್ಯವಸ್ಥೆ, ಪಠ್ಯಪುಸ್ತಕಗಳ ನಿರ್ಮಾಣ, ಸಂಶೋಧನೆಯ ವಿಸ್ತಾರಗಳನ್ನು ಒಳಗೊಂಡಿದೆ.ಇದು ಕ್ಲಪ್ತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಿ,ನಿಖರವಾದ ಫಲಿತಾಂಶವನ್ನು ಪ್ರಕಟಿಸಿ, ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣ ಅಥವಾ ಔದ್ಯೋಗಿಕ ಅವಕಾಶಗಳಿಗೆ ನಿರಂತರತೆಯನ್ನು ಕಾಪಾಡಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ.
ಒಡಂಬಡಿಕೆ ಮತ್ತು ವಿಚಾರಗೋಷ್ಠಿ:
ಶಿಕ್ಷಣ, ಸಂಶೋಧನೆ ಮತ್ತುಉದ್ಯೋಗಎನ್ನುವತ್ರಿವಳಿ ಸೂತ್ರವನ್ನು ಸಮಾಜಮುಖಿಯಾಗಿ ವಿಸ್ತರಿಸುವದೃಷ್ಟಿಯಿಂದ ಇಪ್ಪತ್ತಕ್ಕಿಂತ ಹೆಚ್ಚು ಸಂಘಟನೆಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ಸೌಲಭ್ಯಗಳು:
ಬೋಧನೆಗೆ ಪೂರಕವಾಗಿರುವ ಪಿಪಿಟಿ ಮತ್ತು ವೈಫೈತಂತ್ರಜ್ಞಾನಆಧಾರಿತ ಕೊಠಡಿಗಳು, 70ಸಾವಿರಕ್ಕಿಂತ ಹೆಚ್ಚು ಗ್ರಂಥಗಳಿರುವ ಗ್ರಂಥಾಲಯ, ಆಧುನಿಕಕಂಪ್ಯೂಟರ್ ಪ್ರಯೋಗಾಲಯಗಳು, ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಗಣಿತಶಾಸ್ತ್ರ, ಮನಃಶಾಸ್ತ್ರಕ್ಕೆ ಸಂಬಂಧಿಸಿ ಪ್ರತ್ಯೇಕ ಪ್ರಯೋಗಾಲಯಗಳನ್ನೊಳಗೊಂಡ ಸಂಸ್ಥೆಯಾಗಿದೆ. ಇದರಜೊತೆಗೆ ಅನ್ನಪೂರ್ಣ ಎನ್ನುವ ಉಚಿತ ಮಧ್ಯಾಹ್ನದ ಭೋಜನವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಕ್ರೀಡಾ ವಿಭಾಗ:
ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತ್ಯೇಕ ಕ್ರೀಡಾವಿಭಾಗವಿದೆ. 400 ಮೀಟರ್ಓಟದ ಸ್ಪರ್ಧೆಗೆ ಅನುವಾಗುವಂತಿರುವ ವಿಶಾಲವಾದ ಕ್ರೀಡಾಂಗಣವಿದೆ. ಚದುರಂಗ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಳೆದ ನಾಲ್ಕು ದಶಕಗಳಿಂದ ಮಾನ್ಸೂನ್ಚೆಸ್ ಸ್ಪರ್ಧೆಯು ನಡೆಯುತ್ತಿದೆ. ಕೊಕ್ಕೊ, ಕಬಡ್ಡಿ, ವೇಟ್ಲಿಫ್ಟಿಂಗ್ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಒಂದು ದಾಖಲೆಯಾಗಿದೆ.
ಪಠ್ಯೇತರ ಚಟುವಟಿಕೆಗಳು:
ಪಠ್ಯೇತರ ವಿಭಾಗದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಎನ್.ಸಿ.ಸಿ., ಎನ್.ಎಸ್.ಎಸ್., ರೆಡ್ಕ್ರಾಸ್, ರೋವರ್ಸ್ ಮತ್ತುರೇಂಜರ್ಸ್ ವಿಭಾಗಗಳು ಸಮಾಜಮುಖಿಯಾಗಿಕೆಲಸ ಮಾಡುತ್ತಿವೆ. ಕಳೆದ ಮೂರು ವರ್ಷಗಳಿಂದ ಸತತವಾಗಿಕಾಲೇಜಿನಎನ್ಸಿಸಿ ವಿದ್ಯಾರ್ಥಿಗಳು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಇದರೊಂದಿಗೆ ಲಲಿತಕಲಾ ಸಂಘ, ಯಕ್ಷರಂಜಿನಿ ಮೊದಲಾದಸಂಘಗಳು ವಿದ್ಯಾರ್ಥಿಗಳಿಗೆ ಉಪಯುಕ್ತತರಬೇತಿಗಳನ್ನು ನೀಡುತ್ತಿವೆ. 1965ರಿಂದಲೇ ಅಂತರ್ಕಾಲೇಜು ವಿವೇಕಾನಂದ ಜಯಂತಿ ಸ್ಪರ್ಧೆಗಳನ್ನು ನಡೆಸುತ್ತಾ ಬಂದಿದೆ.
ಉದ್ಯೋಗ ಮತ್ತು ತರಬೇತಿ:
ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಅವಶ್ಯವಿರುವ ವಿವಿಧಕೌಶಲ್ಯಕ್ಕೆ ಸಂಬಂಧಿಸಿ ನಿರಂತರವಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 110 ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕಂಪೆನಿಗಳಲ್ಲಿ ಉದ್ಯೋಗದ ಅವಕಾಶ ದೊರೆತಿದೆ.
ಸರ್ಟಿಫಿಕೆಟ್ ಕೋರ್ಸುಗಳು:
ವಿಶೇಷವಾಗಿ ಉದ್ಯೋಗದಅವಕಾಶವನ್ನು ಹೆಚ್ಚಿಸುವ ಮತ್ತು ಸಂಶೋಧನೆಯ ಪ್ರವೃತ್ತಿಯನ್ನು ಬೆಳೆಸುವ ದೃಷ್ಟಿಯಿಂದ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ 18 ವಿಭಾಗಗಳು ಪದವಿ ಪೂರೈಸುವ ವಿದ್ಯಾರ್ಥಿಗೆ ಆಸಕ್ತಿಯಿರುವ ಕನಿಷ್ಠ ಮೂರು ಸರ್ಟಿಫಿಕೇಟ್ ಕೋರ್ಸುಗಳನ್ನು ಕಡ್ಡಾಯವಾಗಿ ಪೂರೈಸಬೇಕು ಎನ್ನುವ ನಿಯಮವನ್ನು ಅಳವಡಿಸಿಕೊಂಡಿದೆ.
ಸೃಜನಶೀಲ ಮತ್ತು ಸಂಶೋಧನಾ ಬರವಣಿಗೆ:
ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಆಸಕ್ತಿಯನ್ನು ಬೆಳೆಸುವ ದೃಷ್ಟಿಯಿಂದ ಪ್ರತೀವರ್ಷ ಜಾಗೃತಿ ಸಂಚಿಕೆಯನ್ನು ಪ್ರಕಟಿಸಲಾಗುವುದು. ಪತ್ರಿಕೋದ್ಯಮದಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ವಿಕಸನ, ವಿಕಾಸ, ವಿನೂತನ ಪತ್ರಿಕೆಗಳು ಮತ್ತು ಮಲ್ಟಿಮೀಡಿಯ ಸ್ಟುಡಿಯೋ ಉಪಯುಕ್ತವಾಗಿವೆ. ಇದರ ಜೊತೆಗೆ ರೆಡಿಯೊ ಪಾಂಚಜನ್ಯ ಮತ್ತು ವಿಕಸನ ಯುಟ್ಯೂಬ್ಚಾನಲ್ಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆಗೆತರಬೇತಿ:
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಐಎಎಸ್, ಐಪಿಎಸ್ಇತ್ಯಾದಿ ಪರೀಕ್ಷೆಗೆಯಶಸ್, ಸಿ.ಎ.ನಲ್ಲಿ ಆಸಕ್ತಿಯುಳ್ಳವರಿಗೆ ವಿಕಾಸ್ ಮತ್ತು ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯಲು ಬಯಸುವವರಿಗೆ ಭವಿಷ್ ಘಟಕಗಳು ಕೆಲಸ ಮಾಡುತ್ತಿವೆ.
ವಿವೇಕಾನಂದ ಸಂಶೋಧನಕೇಂದ್ರ:
ವಿವೇಕಾನಂದ ಸಂಶೋಧನಕೇಂದ್ರದಅಡಿಯಲ್ಲಿ ಶಿವರಾಮಕಾರಂತ ಅಧ್ಯಯನಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನಕೇಂದ್ರ, ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಶಸ್ತಿಗಳು:
ವಿಶೇಷವಾಗಿ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ನಿರಂಜನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದೇವೆ. ಅದೇರೀತಿ ವಿದ್ವತ್ತಿನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರನ್ನು ಗುರುತಿಸಿಶಂಕರ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದೇವೆ. ಒಂದು ಶಿಕ್ಷಣ ಸಂಸ್ಥೆ ಪ್ರಶಸ್ತಿಯನ್ನು ನೀಡುವ ವಿಶೇಷವಾದ ಅರ್ಹತೆಯಿರುವ ಅಪರೂಪದ ವಿದ್ಯಾಸಂಸ್ಥೆ ನಮ್ಮದು.
ಪ್ರಸಾರಾಂಗ: ವಿವೇಕಾನಂದ ಮಹಾವಿದ್ಯಾಲಯಸ್ವಾಯತ್ತ ಸಂಸ್ಥೆಯಾದ ಬಳಿಕ ಜ್ಞಾನವನ್ನು ಸಮಾಜಕ್ಕೆ ಪಸರಿಸುವ ದೃಷ್ಟಿಯಿಂದ’ಸೌರಭ’ ಎನ್ನುವಜ್ಞಾನ ಪ್ರಸಾರಾಂಗ ವಿಭಾಗವನ್ನು ಆರಂಭಿಸಿದೆ.
ಹಿರಿಯ ವಿದ್ಯಾರ್ಥಿ ಮತ್ತು ರಕ್ಷಕ-ಶಿಕ್ಷಕ ಸಂಘ:ವಿವೇಕಾನಂದಸ್ವಾಯತ್ತ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘ ಮತ್ತುರಕ್ಷಕ ಶಿಕ್ಷಕ ಸಂಘಗಳು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ.
ಸಂಸ್ಥೆಯಅನನ್ಯತೆ : ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹ ಸಾಹಸದಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು- ಎನ್ನುವ ಗೋಪಾಲಕೃಷ್ಣ ಅಡಿಗರ ಕವಿವಾಣಿಯಂತೆ ವಿವೇಕಾನಂದ ಸಂಸ್ಥೆ ತನ್ನದೇ ಆದ ಅನನ್ಯತೆಯನ್ನುಇಟ್ಟುಕೊಂಡಿದೆ.ಇಲ್ಲಿ ಅಧ್ಯಯನ ಬಯಸಿ ಬರುವ ಒಬ್ಬ ಹರೆಯದ ವಿದ್ಯಾರ್ಥಿ/ವಿದ್ಯಾರ್ಥಿನಿ ತಾನು ಯಾವ ರೀತಿಯಲ್ಲಿ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದರೆ ಹೊಸ ನಾಡನ್ನುಕಟ್ಟುವ ಮಾದರಿಯಲ್ಲಿ ಎನ್ನವುದು ಇಲ್ಲಿನ ವಿಶೇಷತೆ. ಅದಕ್ಕಾಗಿ ಒಬ್ಬ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯ ದೃಷ್ಟಿಯಿಂದ ಸಂಸ್ಥೆಯ ಬೆಳಗ್ಗಿನ ತರಗತಿಗಳು ಸರಸ್ವತೀ ವಂದನೆ, ಶಾರದಾಗಾನ, ಬ್ರಹ್ಮನಾದ, ಗಾಯತ್ರೀ ಮಂತ್ರ, ರಾಷ್ಟ್ರವಂದನ, ಶಾಂತಿಮಂತ್ರವನ್ನು ಜಪಿಸುವ ಜೊತೆಗೆ ಬಂಕಿಮಚಂದ್ರಚಟ್ಟೋಪಾಧ್ಯಾಯರು ರಚಿಸಿದ ರಾಷ್ಟ್ರೀಯಗಾನವಾದ ವಂದೇ ಮಾತರಂ ಹಾಡುವುದರ ಮೂಲಕ ದೈನಂದಿನ ತರಗತಿಗಳು ಪ್ರಾರಂಭಗೊಳ್ಳುತ್ತವೆ. ಇದರ ಹಿಂದಿನ ಉದ್ದೇಶ ವಿದ್ಯಾರ್ಥಿಗಳ ಮನೆಯ ಪರಿಸರಗಳು ಭಿನ್ನ ಭಿನ್ನವಾಗಿರುತ್ತವೆ. ತರಗತಿಯೊಳಗಡೆ ಪ್ರವೇಶಿಸಿದ ಮೇಲೆ ಅಧ್ಯಯನ ಎನ್ನುವ ಒಂದು ಸೂತ್ರಕ್ಕೆ ಅಳವಡಿಸಲು ಸರಸ್ವತಿ ವಂದನೆಯ ಜಪ ಸಹಕಾರಿಯಾಗುತ್ತದೆ. ಇದು ವಿದ್ಯಾರ್ಥಿ ತರಗತಿಯಲ್ಲಿ ಮಾನಸಿಕವಾದ ಯಾವುದೇ ಗೊಂದಲವಿಲ್ಲದೇ ಕುಳಿತುಕೊಂಡು ಪಾಠ ಕೇಳಲು ಸಹಕಾರಿಯಾಗಿದೆ. ವಂದೇ ಮಾತರಂ ರಾಷ್ಟ್ರೀಯ ಗಾನ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರ ಮನಸ್ಸನ್ನು ಒಗ್ಗೂಡಿಸಿದ ಹಾಡು. ಆ ಕಾರಣದಿಂದ ಭವ್ಯ ಭಾರತದಕಲ್ಪನೆಯನ್ನು ಕೊಡುವ ಈ ಹಾಡು ಪ್ರತಿನಿತ್ಯ ಕೇಳುವುದರಿಂದ ಇಲ್ಲಿ ಪಾಠ ಕೇಳುವ ಪ್ರತಿಯೊಬ್ಬ ವಿದ್ಯಾರ್ಥಿಯೂ ನೈಜ ರಾಷ್ಟ್ರಪ್ರೇಮಿಯಾಗಿ ಬೆಳೆಯಲು ಸಹಕರಿಸುತ್ತದೆ. ಪ್ರತಿನಿತ್ಯ ವಿವೇಕಾನಂದರ ನುಡಿಮುತ್ತನ್ನು ಹೇಳಿ ಅದರ ಅರ್ಥವನ್ನು ವಿಶ್ಲೇಷಣೆ ಮಾಡುತ್ತೇವೆ. ವಾಲ್ಮೀಕಿ, ಕನಕದಾಸ ಮುಂತಾದ ರಾಷ್ಟ್ರಕಂಡ ಅನೇಕ ಸಂತರ, ಹೋರಾಟಗಾರರ, ಧಾರ್ಮಿಕ ಪುರುಷರ ಜಯಂತಿಗಳನ್ನು, ಯೋಗ ದಿನ, ಗುರು ಪೂರ್ಣಿಮೆ, ರಕ್ಷಾಬಂಧನ ಮುಂತಾದ ಅನೇಕ ವಿಶೇಷ ದಿನಗಳನ್ನು, ಸ್ವಾತಂತ್ರ್ಯೋತ್ಸವ, ವಿವೇಕಾನಂದಜಯಂತಿ, ಗಣರಾಜ್ಯೋತ್ಸವ ಮುಂತಾದರಾಷ್ಟ್ರೀಯ ಹಬ್ಬಗಳನ್ನು, ಗಣೇಶೋತ್ಸವ, ಶ್ರೀಕೃಷ್ಣಾಷ್ಟಮಿ, ದೀಪಾವಳಿ, ಯುಗಾದಿ ಮುಂತಾದಧಾರ್ಮಿಕ ಹಬ್ಬಗಳನ್ನು ಆಚರಿಸುತ್ತೇವೆ. ವಿದ್ಯಾರ್ಥಿಯ ಮಾನಸಿಕ ಗೊಂದಲವನ್ನು ನಿವಾರಿಸುವ ದೃಷ್ಟಿಯಿಂದ ಧ್ಯಾನ ಮಂದಿರವಿದೆ, ಜೊತೆಗೆ ವಿದ್ಯಾರ್ಥಿಯ ಮಾನಸಿಕ ಅಘಾತಗಳನ್ನು ಪರಿಹರಿಸಲುಯೋಗ್ಯವಾದ ರೀತಿಯ ಅಪ್ತಸಲಹಾ ಕೇಂದ್ರವೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಸ್ನಾತಕ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ರಾಷ್ಟ್ರ ಮೊದಲು ಎನ್ನುವ ಧ್ಯೇಯದೊಂದಿಗೆ ಹೊಸ ನಾಡನ್ನು ಕಟ್ಟುವಂತೆ ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿದ್ದೇವೆ.
ಅಧ್ಯಯನದ ಅವಕಾಶಗಳು
B.A – HEP, HEK, HES, HEE, HJE, HJK, PsSE
B.Sc. – PMC, PMCs, BZC, BZPs
B.Com (General)
B.Com (Business Data Analytics)
B.Com Integrated CA/CS
BBA (General)
BBA (Logistics)
BCA (General)
BCA in Artificial Intelligence and Machine Learning
BCA in Cyber Security
M.Com. Master of Commerce
M.Sc. Chemistry (General)
M.Sc. Industrial Chemistry
M.A. in Journalism and Mass Communications
ಉಚಿತ ಶಿಕ್ಷಣ: 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಕಲಾ ಮತ್ತು ಪ್ರಥಮ ವಿಜ್ಞಾನ ವಿಭಾಗಕ್ಕೆ ಸೇರುವ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗೆ ಉಚಿತ ಶಿಕ್ಷಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.