ಪುತ್ತೂರು: ರಸ್ತೆಬದಿ ಸತ್ತು ಬಿದ್ದಿದ್ದ ನಾಗರ ಹಾವೊಂದರ ಅಂತ್ಯ ಸಂಸ್ಕಾರ ನಡೆಸಿ ಎಲ್ಲರ ಗಮನ ಸೆಳೆದಿದ್ದ ಪಡ್ಡಾಯೂರು ನಿವಾಸಿ ಹರೀಶ್ ನಾೖಕ್ ಮತ್ತು ಮಂಜಲ್ಪಡ್ಪು ನಾಗರಿಕ ಬಳಗ ಇಂದು ಸರ್ಪ ಸಂಸ್ಕಾರ ನಡೆಸುವ ಮೂಲಕ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮೇ.16ರಂದು ಮಂಜಲ್ಪಡ್ಪುವಿನಲ್ಲಿ ವಾಹನವೊಂದರ ಚಕ್ರದಡಿಗೆ ಸಿಲುಕಿ ನಾಗರ ಹಾವೊಂದು ಮೃತ ಪಟ್ಟಿತ್ತು. ಇದನ್ನು ನೋಡಿದ ಹರೀಶ್ ನಾೖಕ್ ಬಳಗ ಅಂದು ಹಾವಿನ ಅಂತ್ಯ ಸಂಸ್ಕಾರವನ್ನು ವಿಧಿವತ್ತಾಗಿ ನಡೆಸಿತ್ತು. ಇಂದು ಇದರ ಮುಂದುವರಿದ ಭಾಗವಾಗಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿಯನ್ನು ಇದೇ ತಂಡ ನೆರವೇರಿಸಿದೆ. ವೇದಮೂರ್ತಿ ಜಯರಾಮ ಜೋಯಿಸ ಮತ್ತು ಉದಯ ಸಿರಿಯೂರು ನೇತೃತ್ವದಲ್ಲಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ನಡೆಸಿಕೊಟ್ಟ ಹರೀಶ್ ನಾೖಕ್ ಮತ್ತು ಮಂಜಲ್ಪಡ್ಪು ಬಳಗದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸುಮಾರು 500ರಷ್ಟು ಮಂದಿ ಭಾಗವಹಿಸಿದ್ದು, ಎಲ್ಲರಿಗೂ ಅನ್ನ ಪ್ರಸಾದ ವಿತರಿಸಲಾಯಿತು. ರೋಶನ್ ರೈ, ಕೇಶವ ಪ್ರಸಾದ್, ರಾಕೇಶ್ ಪರ್ಲಡ್ಕ, ಬಾಲಕೃಷ್ಣ ಭಾರತೀಕುಮೇರು, ರಾಧಾಕೃಷ್ಣ ನಾೖಕ್, ರತ್ನಾಕರ ನಾೖಕ್, ರಮೇಶ್, ರಂಜಿತ್ ಬಂಗೇರ, ಸುನೀತ್, ಸುಧಾಕರ್ ಕೆ.ಪಿ, ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.