ಪುತ್ತೂರು: ಭಾರೀ ಮಳೆಗೆ ಸರ್ವೆಯ ಗೌರಿ ಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಸವಣೂರು- ಕಾಣಿಯೂರು ಸಂಪರ್ಕ ರಸ್ತೆಯ ಸರ್ವೆ ಬಳಿಯ ಸೇತುವೆ ಮುಳಗಡೆಯಾಗಿದ್ದು, ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗಿದೆ ಎಂದು ತಿಳಿದು ಬಂದಿದೆ.
ಸೇತುವೆ ಮುಳುಗಡೆಗೊಂಡ ಪರಿಣಾಮ ಸಂಪರ್ಕ ಕಡಿತಗೊಂಡು ವಾಹನ ಸವಾರರು, ದಿನನಿತ್ಯದ ಓಡಾಟಗಾರರಿಗೆ ಸಮಸ್ಯೆ ಉಂಟಾಗಿತ್ತು. ಇದೀಗ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ.