ಪುತ್ತೂರು: ಪ್ರಶಾಂತ್ ಮಹಲ್ನಲ್ಲಿರುವ ಬ್ಯಾಂಕ್ ಆಫ್ ಬರೋಡ ಇದರ ಮುಖ್ಯ ವ್ಯವಸ್ಥಾಪಕ ಸಾಧಿಕ್ ಎಸ್.ಎಮ್ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸಹಕರಾ ರತ್ನ ಕೆ.ಸೀತಾರಾಮ ರೈ ಅವರು ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಬೀಳ್ಕೊಟ್ಟರು.
ಇದೇ ಸಂದರ್ಭ ಬ್ಯಾಂಕ್ಗೆ ಸಾಧಿಕ್ ಅವರ ಸ್ಥಾನ ತುಂಬಿದ ನೂತನ ವ್ಯವಸ್ಥಾಪಕ ಭರತ್ ಎಚ್ ವಿ ಅವರನ್ನು ಕೆ.ಸೀತಾರಾಮ ರೈ ಅವರು ಸ್ವಾಗತಿಸಿದರು. ಈ ಸಂದರ್ಭ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಜಿ.ಎಮ್ ವಸಂತ ಜಾಲಾಡಿ, ಎಜಿಎಮ್ ಸುನಾದ್ ಶೆಟ್ಟಿ, ಪ್ರಶಾಂತ್ ಮಹಲ್ನ ಮ್ಯಾನೇಜರ್ ರಾಮಣ್ಣ ಗೌಡ, ಮದುಸೂದನ ಶೆಣೈ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.