ಗೌರಾವಾಧ್ಯಕ್ಷ: ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ: ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಕಾರ್ಯದರ್ಶಿ: ಕೀರ್ತಿ ನಕ್ಷತ್ರಿತ್ತಾಯ
ಪುತ್ತೂರು: ನರೇಂದ್ರ ಪದವಿ ಪೂರ್ವ ಕಾಲೇಜ್ ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸಲಿರುವ ಕುರಿಯ ಗ್ರಾಮ ವಿಕಾಸ ಸಮಿತಿಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ರಚನೆ ಜೂ.10ರಂದು ನಡೆಯಿತು. ಗೌರವಾಧ್ಯಕ್ಷರಾಗಿ ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷರಾಗಿ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಕಾರ್ಯದರ್ಶಿಯಾಗಿ ಕೀರ್ತಿ ನಕ್ಷತ್ರಿತ್ತಾಯ, ಉಪಾಧ್ಯಕ್ಷರುಗಳಾಗಿ ಮೋಹನ್ ಪಾಟಾಳಿ, ರಮ್ಯ ಪಡ್ಪು, ಜೊತೆ ಕಾರ್ಯದರ್ಶಿಗಳಾಗಿ ಶ್ರೀಕೃಷ್ಣ, ಸುಕನ್ಯಾ, ಸದಸ್ಯರುಗಳಾಗಿ ಜೈರಾಜ್ ಭಂಡಾರಿ ಡಿಂಬ್ರಿ, ಧನರಾಜ್ ಅಲೇಕಿ, ಮಧು ನರಿಯೂರು, ಶಶಿಧರ್ ಕಿನ್ನಿಮಜಲು, ಚಂದ್ರಹಾಸ್ ರೈ ತುಂಬೆದಕೋಡಿ, ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಬೂಡಿಯಾರ್, ಸತೀಶ್ ರೈ ಡಿಂಬ್ರಿ, ನವೀನ್ ಕುಮಾರ್ ರೈ ಬಳ್ಳಮಜಲು ಹಾಗೂ ವಿಜಯಹರಿ ರೈ ಬಳ್ಳಮಜಲುರವರನ್ನು ಆಯ್ಕೆ ಮಾಡಲಾಗಿದೆ.