ಉಪ್ಪಿನಂಗಡಿ: ಮರದ ಗೆಲ್ಲು ತೆರವಿಗೆ ಮನವಿ

0

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್‌ನಿಲ್ದಾಣದ ಬಳಿಯಿರುವ ರಿಕ್ಷಾ ನಿಲ್ದಾಣದ ಮೇಲ್ಚಾವಣಿಗೆ ಕೆಲವು ಮರಗಳ ಗೆಲ್ಲುಗಳು ವ್ಯಾಪಿಸಿಕೊಂಡಿದ್ದು, ಮಳೆಗಾಲದಲ್ಲಿ ಇವುಗಳು ಮುರಿದು ಬೀಳುವ ಸಂಭವವಿದೆ. ಆದ್ದರಿಂದ ಇದನ್ನು ತೆರವು ಮಾಡುವಂತೆ ಉಪ್ಪಿನಂಗಡಿಯ ನೇತ್ರಾವತಿ ಅಟೋ ಚಾಲಕ- ಮಾಲಕರ ಸಂಘವು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಮನವಿ ಮಾಡಿದೆ.
ಈ ಮರದ ಕೆಲವು ಗೆಲ್ಲುಗಳು ವಿದ್ಯುತ್ ತಂತಿಗಳಿಗೂ ಸ್ಪರ್ಶಿಸುತ್ತಿವೆ. ಇಲ್ಲಿ ಹಲವು ಅಟೋ ರಿಕ್ಷಾಗಳು ನಿಲುಗಡೆಗೊಳ್ಳುತ್ತಿದ್ದು, ಅಟೋ ಚಾಲಕರು, ಪ್ರಯಾಣಿಕರು ಇಲ್ಲಿರುತ್ತಾರೆ. ಆದ್ದರಿಂದ ಅನಾಹುತ ಸಂಭವಿಸಿದರೆ ದೊಡ್ಡ ಅವಘಢವಾಗುವ ಸಂಭವಿದೆ. ಆದ್ದರಿಂದ ಇದನ್ನು ತೆರವು ಮಾಡಿಕೊಡಲು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ನೀಡಿದ ನಿಯೋಗದಲ್ಲಿ ನೇತ್ರಾವತಿ ಆಟೋ ಚಾಲಕ- ಮಾಲಕರ ಸಂಘದ ಅಧ್ಯಕ್ಷರಾದ ಫಾರೂಖ್ ಝಿಂದಗಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಬಂಡಾಡಿ, ಕೋಶಾಧಿಕಾರಿ ಕಲಂದರ್ ಶಾಫಿ ನೆಕ್ಕಿಲಾಡಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್, ಉಪಾಧ್ಯಕ್ಷರಾದ ಅಣ್ಣಿ ಮಲ್ಲಕಲ್, ರಾಘವೇಂದ್ರ ನೆಟ್ಟಿಬೈಲ್, ವಿಜಯ ಕಜೆಕಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here